ADVERTISEMENT

ವೇಗವಾಹಿನಿ ದಿನಪತ್ರಿಕೆ ಸಂಪಾದಕ ಸುರೇಶ ಹಳ್ಳಿಖೇಡ ನಿಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 12:29 IST
Last Updated 29 ಸೆಪ್ಟೆಂಬರ್ 2022, 12:29 IST
ಸುರೇಶ ಹಳ್ಳಿಖೇಡ
ಸುರೇಶ ಹಳ್ಳಿಖೇಡ   

ಕಲಬುರಗಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ವೇಗವಾಹಿನಿ ದಿನಪತ್ರಿಕೆ ಸಂಪಾದಕ ಸುರೇಶ ಹಳ್ಳಿಖೇಡ (52) ಗುರುವಾರ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಕಲಬುರಗಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುರೇಶ ಪತ್ರಿಕಾ ಛಾಯಾಚಿತ್ರಗಾರರಾಗಿ ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. 2010ರಲ್ಲಿ ಕಲಬುರಗಿ ಅಪ್ಪನ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾದಾಗ ಜೀವದ ಹಂಗು ತೊರೆದು ಮೊಸಳೆ ಚಿತ್ರ ಸೆರೆಹಿಡಿದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.