ADVERTISEMENT

ಆಟೊ ಚಾಲಕನ ಕೊಲೆ: ಮೂವರ ಬಂಧನ

ತಂಗಿ ಚುಡಾಯಿಸಿದವರನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 4:06 IST
Last Updated 14 ಮಾರ್ಚ್ 2021, 4:06 IST
ಕಮಲಾಪುರ ತಾಲ್ಲೂಕಿನ ಕೊಟ್ಟರಗಾ ಗ್ರಾಮದ ಆಟೊ ಚಾಲಕ ಜಗನ್ನಾಥ ಬಸಗೊಂಡ ಅವರ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ
ಕಮಲಾಪುರ ತಾಲ್ಲೂಕಿನ ಕೊಟ್ಟರಗಾ ಗ್ರಾಮದ ಆಟೊ ಚಾಲಕ ಜಗನ್ನಾಥ ಬಸಗೊಂಡ ಅವರ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ   

ಕಲಬುರ್ಗಿ: ಕಮಲಾಪುರ ತಾಲ್ಲೂಕಿನ ಕೊಟ್ಟರಗಾ ಗ್ರಾಮದ ಆಟೊ ಚಾಲಕ ಜಗನ್ನಾಥ ಬಸಗೊಂಡ ಅವರ ಕೊಲೆ ಪ್ರಕರಣದ ಐವರು ಪೈಕಿ ಮೂವರು ಕೊಲೆ ಆರೋಪಿಗಳನ್ನು ಗ್ರಾಮೀಣಠಾಣೆ ಪೊಲೀಸರು 48 ಗಂಟೆಯೊಳಗೆ ಬಂಧಿಸಿದ್ದಾರೆ.

ಕಲಬುರ್ಗಿ ನಗರದ ನಾಗರಾಜ ಬರಗಾಲಿ, ದತ್ತು ಹಡಪದ ಹಾಗೂ ಕೊಟ್ಟರಗಾ ಗ್ರಾಮದ ನಾಗರಾಜ ಅಂಬಲಗಿ ಬಂಧಿತರು. ಕೊಲೆಗೀಡಾದ ಜಗನ್ನಾಥ ಅವರ ಸಹೋದರಿ ಶಾಲೆಗೆ ಹೋಗುತ್ತಿದ್ದಾಗ ನಾಗರಾಜ ಅಂಬಲಗಿ, ಸಚಿನ ಸಸ್ತಾಪುರ, ನಾಗಪ್ಪ ಮಂಟೋಳಿ ಎಂಬುವರು ಪದೇಪದೇ ಚುಡಾಯಿಸುತ್ತಿದ್ದರು. ಇದನ್ನು ಪಶ್ನಿಸಿದ್ದಕ್ಕೆ ಮೂವರೂ ಆರೋಪಿಗಳು ಸೇರಿಕೊಂಡು ಜಗನ್ನಾಥ ಜತೆಗೆ ತಂಟೆ ತೆಗೆದಿದ್ದರು. ಅವರ ಕೊಲೆಗೂ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ 10ರಂದು ಜಗನ್ನಾಥ ಅವರ ಆಟೊದಲ್ಲಿ ಹತ್ತಿ ಬಾಡಿಗೆಗೆ ಎಂದು ಕರೆದುಕೊಂಡು ಬಂದು ಆರೋಪಿಗಳು, ತಾಜ್ ಸುಲ್ತಾನಪುರದ ರೈಲು ನಿಲ್ದಾಣದ ಸಮೀಪದ ಜಮೀನೊಂದರಲ್ಲಿ ಕೊಲೆ ಮಾಡಿದ್ದರು. ಮಾರ್ಚ್‌ 11ರಂದು ಶವಪತ್ತೆಯಾಗಿತ್ತು. ಈ ಬಗ್ಗೆ ಜಗನ್ನಾಥ ಅವರ ತಾಯಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ADVERTISEMENT

ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ, ಡಿಸಿಪಿ ಡಿ.ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ ಹಾಗೂ ಸಿ ಉಪವಿಭಾಗದ ಎಸಿಪಿ ಜೆ.ಎಚ್. ಇನಾಮದಾರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಭಾಸು ಚವ್ಹಾಣ,ಪಿಎಸ್‍ಐ ಕವಿತಾ ಚವ್ಹಾಣ ನೇತೃತ್ವದಲ್ಲಿ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ. ಕೊಲೆಗೆ ಬಳಸಿದ ಚಾಕು, ಆಟೊ ರಿಕ್ಷಾ ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಮತ್ತಿಬ್ಬರು ಆರೋಪಿಗಳು ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್‍ಐ ಎಂ.ಎ.ಬೇಗ್, ಸಿಬ್ಬಂದಿ ಶಿವರರಣಪ್ಪ ಮಂಗಲಗಿ,ಶಿವಶರಣಪ್ಪ ಬೋಚರೆ, ಅಂಬಾಜಿ, ಯಲ್ಲಪ್ಪ ತಳವಾರ, ಮಲ್ಲಿಕಾರ್ಜುನ, ಪ್ರಕಾಶ ಬಾಗೇವಾಡಿ, ನಾಗೇಂದ್ರ ಸಗರ, ಪ್ರಶಾಂತ ದೇಶೆಟ್ಟಿ, ಅನಿಲ ರಾಠೋಡಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.