ADVERTISEMENT

​ಕಲಬುರ್ಗಿ: ಚಿರತೆ ದಾಳಿಗೆ ಮೂರು ಹಸು ಬಲಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 10:37 IST
Last Updated 20 ಮಾರ್ಚ್ 2020, 10:37 IST
ಚಿರತೆ ದಾಳಿಗೆ ಬಲಿಯಾದ ಕರು
ಚಿರತೆ ದಾಳಿಗೆ ಬಲಿಯಾದ ಕರು   

ಕಲಬುರ್ಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಜನರಿಗೆ ಚಿರತೆ ಭಯ ಕಾಡುತ್ತಿದೆ.‌ ಕಳೆದ ಮೂರು ದಿನಗಳಿಂದ ಚಿರತೆ ಸುತ್ತಾಡುತ್ತಿದ್ದು, ಮೂರು ಹಸುಗಳ ಮೇಲೆ ದಾಳಿ ಮಾಡಿ‌ ಕೊಂದು ಹಾಕಿದೆ.

ಹಂಚನಾಳ ಎಸ್.ಎನ್. ಗ್ರಾಮ, ಅಂಕಲಗಾ, ಬೋಸಗಾ ಬಿ. ಗ್ರಾಮದಲ್ಲಿ ಚಿರತೆ ದಾಳಿ‌ ಮಾಡಿದೆ. ಇದರಿಂದ ಈ ಮೂರು ಗ್ರಾಮಗಳ ಜನರ ಆತಂಕಗೊಂಡಿದ್ದಾರೆ.

ಚಿರತೆ ದಾಳ ವಿಷಯದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ, ಪರಿಶೀಲನೆ ನಡೆಸಿದರು. ಹೆಜ್ಜೆ ಗುರುತು ಮೇಲೆ ಚಿರತೆಯೇ ಬಂದಿರುವ ಅನುಮಾನ ವ್ಯಕ್ತವಾಗಿದೆ.

ADVERTISEMENT

ಭಯದಲ್ಲಿರುವ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.