ಪ್ರಜಾವಾಣಿ ವಾರ್ತೆ
ವಾಡಿ: ವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅದಾನಿ ಫೌಂಡೇಶನ್ ವತಿಯಿಂದ ಈಚೆಗೆ ನಿರ್ಮಿಸಲಾದ ಮಿನಿ ಬಸ್ ನಿಲ್ದಾಣವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಸಮುದಾಯ ಅಭಿವೃದ್ಧಿ ಯೋಜನೆಯಡಿ ₹ 25 ಲಕ್ಷ ವೆಚ್ಚದ ಬಸ್ ನಿಲ್ದಾಣವನ್ನು ಅದಾನಿ ಸಮೂಹ ಸಿಮೆಂಟ್ ಕಾರ್ಖಾನೆಗಳ ಸಿಇಒ ವಿನೋದ ಬಹೇಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉತ್ಪಾದನಾ ವಿಭಾಗದ ಮುಖ್ಯಸ್ಥ ವೈಭವ ದೀಕ್ಷಿತ್, ಸಿಎಂಒ ಪರಾಗಕುಮಾರ ಶ್ರೀವಾಸ್ತವ, ಎಚ್ಆರ್ ವಿಭಾಗದ ಮುಖ್ಯಸ್ಥ ಯಡ್ಡು ಕೋಟೇಶ್ವರರಾವ, ಪರಿಸರ ವಿಭಾಗದ ಮುಖ್ಯಸ್ಥ ರಮೇಶ ಗೌಡಪ್ಪನವರ, ರಮೇಶ ಕುಮಾರ, ಶಬ್ಬೀರ್ ಶೇಕ್, ಕಾರ್ಮಿಕ ಸಂಘದ ಅಧ್ಯಕ್ಷ ಶರಣಬಸ್ಸು ಶಿರೂರಕರ, ಪ್ರಮುಖರಾದ ಸೈಯ್ಯದ್ ಮಹೇಮೂದ ಸಾಹೇಬ್, ಬಸವರಾಜ ಪಂಚಾಳ ಸಹಿತ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.