ADVERTISEMENT

ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ ನಿಧನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 9:35 IST
Last Updated 26 ಜುಲೈ 2021, 9:35 IST
ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ
ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ    

ಯಡ್ರಾಮಿ: ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ (78) ಸೋಮವಾರ ನಿಧನರಾದರು. ಪಟ್ಟಣದ ಮಠದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ 1942ರ ಜೂನ್ 2ರಂದು ಜನಿಸಿದ ಅವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ನಂತರದ ಶಿಕ್ಷಣವನ್ನು ಯಡ್ರಾಮಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಪಡೆದರು. ಶಿಕ್ಷಣದ ವೇಳೆ ಧಾರವಾಡದ ಮುರುಘಾಮಠದಲ್ಲೂ ಅವರು ತಂಗಿದರು.

ಯಡ್ರಾಮಿಯಲ್ಲಿ ಮಠದ ಪೀಠಾಧಿಪತಿಯಾದ ದಿನದಿಂದ ಸಿದ್ದರಾಮ ಸ್ವಾಮೀಜಿ ಅವರು ಭಕ್ತರು ಸೇರಿದಂತೆ ಎಲ್ಲರ ಏಳ್ಗೆಗೆ ಶ್ರಮಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ನೆರವಾದರು. ಶಾಂತಿ, ಸೌಹಾರ್ದ ಬದುಕಿಗೆ ಅವರು ಮಾರ್ಗದರ್ಶನ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.