ADVERTISEMENT

ಕಿತ್ತುಹೋಗಿರುವ ರಸ್ತೆ, ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 7:11 IST
Last Updated 17 ಅಕ್ಟೋಬರ್ 2017, 7:11 IST

ವಿರಾಜಪೇಟೆ: ಪಟ್ಟಣದ ಬದ್ರಿಯಾ ಜಂಕ್ಷನ್‌ನಿಂದ ಮಾಂಸದ ಮಾರುಕಟ್ಟೆಗೆ ಸಾಗುವ ಪ್ರಮುಖ ಕಾಂಕ್ರಿಟ್ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿದೆ.

ಮಾಕುಟ್ಟ–ಕೊಣನೂರು ಅಂತರರಾಜ್ಯ ಹೆದ್ದಾರಿಯ ಮೂಲಕ ಆಗಮಿಸುವ ಬಹುತೇಕ ಎಲ್ಲ ವಾಹನಗಳು ಈ ರಸ್ತೆ ಮೂಲಕವೇ ಸಂಚರಿಸಲಿವೆ. ರಸ್ತೆ ಅಲ್ಲಲ್ಲಿ ಕಿತ್ತುಹೋಗಿದೆ.
ಕಾಂಕ್ರಿಟ್ ನಡುವೆ ಹಾಕಿರುವ ಕಬ್ಬಿಗಳ ಸರಳುಗಳು ಕೆಲವೆಡೆ ಹೊರಬಂದಿವೆ. ರಸ್ತೆ ಇಳಿಜಾರಿನಿಂದ ಕೂಡಿದ್ದು, ಹೊಂಡ ಹಾಗೂ ಕಿತ್ತಿರುವ ಕಾಂಕ್ರಿಟ್‌ನಿಂದ ಅಪಾಯ ತಪ್ಪಿದ್ದಲ್ಲ.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕ್ರಮಜರುಗಿಸಲಿ.
ಜೆಫ್ರಿ ಡಿಸಿಲ್ವಾ,
ವಿರಾಜಪೇಟೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.