ಸಿದ್ದಾಪುರ: ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಸಿದ್ದಾಪುರ ಮತ್ತು ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡ ನಿರಂತರ ಜಾನುವಾರುಗಳ ಮೇಲೆ ವ್ಯಾಘ್ರನ ದಾಳಿ ಮುಂದುವರಿದಿದೆ.
ಮಾಲ್ದಾರೆ ಸಿದ್ದಾಪುರ ಗಡಿಯ ಕಾಫಿ ತೋಟದಲ್ಲಿ ಹುಲಿ ದಾಳಿಗೆ ಒಳಗಾದ ಮತ್ತೊಂದು ಹಸುವಿನ ಕಳೇಬರ ಮಂಗಳವಾರ ಪತ್ತೆಯಾಗಿತ್ತು.
ಇಲ್ಲಿನ ಬೆಳೆಗಾರ ಅರುಣಾಚಲ ಅವರ ಒಡೆತನದ ಶ್ರೀನಿವಾಸ ಎಸ್ಟೇಟ್ನಲ್ಲಿ ಶಂಕರನ್ಕುಟ್ಟಿ ಎಂಬ ವ್ಯಕ್ತಿಗೆ ಸೇರಿದ ಹಸುವೊಂದು ಹುಲಿ ದಾಳಿಯಿಂದ ಪ್ರಾಣ ಕಳೆದುಕೊಂಡಿದೆ. ಕಳೆದ ಒಂದು ವಾರದ ಹಿಂದೆ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಖೆಯ ಅಶೋಕ್ ಹುಲಗುಂದ್, ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.