ADVERTISEMENT

ಅಕ್ಕಮಹಾದೇವಿ ಜಯಂತಿ: ಶಿವಶರಣೆಯ ಆದರ್ಶಗಳನ್ನು ಪಾಲಿಸಲು ಕರೆ

ಮಡಿಕೇರಿಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 4:01 IST
Last Updated 14 ಏಪ್ರಿಲ್ 2025, 4:01 IST
ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಮಡಿಕೇರಿಯ ಮಹದೇವಪೇಟೆಯ ಬಸವೇಶ್ವರ ದೇವಾಲಯದಲ್ಲಿ ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಮಡಿಕೇರಿಯ ಮಹದೇವಪೇಟೆಯ ಬಸವೇಶ್ವರ ದೇವಾಲಯದಲ್ಲಿ ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ಮಡಿಕೇರಿ: ಅಕ್ಕಮಹಾದೇವಿ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅಕ್ಕನ ಬಳಗದ ಅಧ್ಯಕ್ಷೆ ವಸುಂಧರಾ ಪ್ರಸನ್ನ ತಿಳಿಸಿದರು.

ಇಲ್ಲಿನ ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಮಹದೇವಪೇಟೆಯ ಬಸವೇಶ್ವರ ದೇವಾಲಯದಲ್ಲಿ ನಡೆದ 12ನೇ ಶತಮಾನದ ಮಹಾಶಿವಶರಣೆ, ಕವಯತ್ರಿ ಅಕ್ಕಮಹಾದೇವಿ ಅವರ ಜಯಂತಿ ಕಾರ್ಯಕ್ರಮವದಲ್ಲಿ ಅವರು ಮಾತನಾಡಿದರು.

ಚಿಕ್ಕವಯಸ್ಸಿನಲ್ಲಿಯೇ ವೈರಾಗ್ಯಮತಿಯಾದ ಮಹಾದೇವಿ ತಮ್ಮಲ್ಲಿನ ಅಗಾಧವಾದ ಜ್ಞಾನದಿಂದಾಗಿ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು ಅವರಿಂದ ಅಕ್ಕಾಮಹಾದೇವಿ ಎಂದು ಕರೆಸಿಕೊಂಡ ಶ್ರೇಷ್ಠ ಶಿವಶರಣೆಯಾಗಿದ್ದಾರೆ. ಇವರ ಆದರ್ಶಗಳನ್ನು ಮಹಿಳೆಯರು ಹಾಗೂ ಮಕ್ಕಳು ಅರಿಯಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ದೇವಾಲಯ ಸಮಿತಿ ಅಧ್ಯಕ್ಷರಾದ ರುದ್ರಪ್ರಸನ್ನ ಮಾತನಾಡಿ, ‘ಇಂದಿನ ಆಧುನಿಕ ಕಾಲದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಅಕ್ಕನ ಆದರ್ಶಗಳು ಸದಾ ಅನುಕರಣೀಯ ಎಂದರು.

ಈ ವೇಳೆ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಅಕ್ಕನಬಳಗದ ಕಾರ್ಯದರ್ಶಿ ಬಿ.ಎಸ್.ನಾಗರತ್ನ ಶಿವಕುಮಾರ್, ಪದಾಧಿಕಾರಿಗಳಾದ ವಸುಂಧರಾ, ಲೀಲಾ, ರೂಪಾ, ಶೈಲಾ, ದಿವ್ಯಾ, ಮಂಜುಳಾ, ಧನ್ಯಾ, ಕವಿತಾ, ಪ್ರೇಮಾ, ಶೋಭಾ ಕಮಲಾಮಣಿ, ಗೀತಾ ಬಸವರಾಜು, ಸಾಕಮ್ಮ ಪ್ರಭಾಕರ್, ಕವಿತಾ ಹರೀಶ್, ಪ್ರೇಮಾ, ಗೀತಾ ಲೀಲಾ ಉಳ್ಳಾಗಡ್ಡಿ, ಗೀತಾ, ಕಾರ್ಯದರ್ಶಿ ಪ್ರಶಾಂತ್, ಮಣಿ ಮುರುಗೇಶ್ ಭಾಗವಹಿಸಿದ್ದರು.

ಅರ್ಚಕ ಪ್ರಕಾಶ್ ಪೂಜಾರಿ ಪೂಜಾ ವಿಧಿ ನಡೆಸಿಕೊಟ್ಟರು.

ಈ ವೇಳೆ ಮಹಿಳೆಯರು ಹಾಗೂ ಮಕ್ಕಳಿಂದ ಅಕ್ಕನ ವಚನಗಳ ಗಾಯನ ನಡೆಯಿತು. ಅಕ್ಕಮಹಾದೇವಿ ಜೀವನ ಸಾಧನೆಯ ಕುರಿತಾದ ಪ್ರವಚನವನ್ನು ಆಲಿಸಲಾಯಿತು.

ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಮಡಿಕೇರಿಯ ಮಹದೇವಪೇಟೆಯ ಬಸವೇಶ್ವರ ದೇವಾಲಯದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿಯಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.