ADVERTISEMENT

ವಿದ್ಯುತ್‌ ಆಘಾತ: ಮೂವರು ಕಾರ್ಮಿಕರ ಸಾವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 7:59 IST
Last Updated 1 ಏಪ್ರಿಲ್ 2019, 7:59 IST
ತೆಂಗಿನಕಾಯಿ ಕೀಳುತ್ತಿರುವ ವ್ಯಕ್ತಿ– ಸಾಂದರ್ಭಿಕ ಚಿತ್ರ
ತೆಂಗಿನಕಾಯಿ ಕೀಳುತ್ತಿರುವ ವ್ಯಕ್ತಿ– ಸಾಂದರ್ಭಿಕ ಚಿತ್ರ   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಕಬ್ಬಿಣದ ಏಣಿ ಸಹಾಯದಿಂದ ತೋಟದಲ್ಲಿ ತೆಂಗಿನಕಾಯಿ ಕೀಳುವಾಗ ವಿದ್ಯುತ್‌ ತಂತಿ ತಗುಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅರವತೋಕ್ಲು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕಾವಾಡಿ ಗ್ರಾಮದ ಧರ್ಮಜ್ಜ (50), ರವಿ (40), ಸತೀಶ್ (50) ಮೃತಪಟ್ಟ ಕಾರ್ಮಿಕರು.

ತೆಂಗಿನ ಮರದ ಪಕ್ಕದಲ್ಲೇ ಹಾದು ಹೋಗಿದ್ದ ತಂತಿ ತಾಗಿದ ಪರಿಣಾಮ ಈ ದುರ್ಘಟನೆ ನಡೆದಿದೆ. ದೇಹಗಳು ಸುಟ್ಟು ಕರಕಲಾಗಿವೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.