ADVERTISEMENT

ಶನಿವಾರಸಂತೆ- ಕಾಡಾನೆ ದಾಳಿ: ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 21:48 IST
Last Updated 5 ಫೆಬ್ರುವರಿ 2023, 21:48 IST
ಶನಿವಾರಸಂತೆ ಬಳಿಯ ಶಾಂತಪುರದ ಹೇಮಾವತಿ ಹಿನ್ನೀರಿನ ಸಮೀಪ ಆನೆ ದಾಳಿಯಿಂದ ಕಾರ್ಮಿಕ ಕುಮಾರ (40) ಮೃತಪಟ್ಟ ಸ್ಥಳಕ್ಕೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ, ಪೊಲೀಸ್ ಇನ್‌ಸ್ಪೆಕ್ಟರ್ ನಾಗೇಶ್ ಹಾಗೂ ಸಿಬ್ಬಂದಿ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದರು
ಶನಿವಾರಸಂತೆ ಬಳಿಯ ಶಾಂತಪುರದ ಹೇಮಾವತಿ ಹಿನ್ನೀರಿನ ಸಮೀಪ ಆನೆ ದಾಳಿಯಿಂದ ಕಾರ್ಮಿಕ ಕುಮಾರ (40) ಮೃತಪಟ್ಟ ಸ್ಥಳಕ್ಕೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ, ಪೊಲೀಸ್ ಇನ್‌ಸ್ಪೆಕ್ಟರ್ ನಾಗೇಶ್ ಹಾಗೂ ಸಿಬ್ಬಂದಿ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದರು   

ಶನಿವಾರಸಂತೆ (ಕೊಡಗು ಜಿಲ್ಲೆ): ಸಮೀಪದ ಶಾಂತಪುರದ ಹೇಮಾವತಿ ಹಿನ್ನೀರಿನ ಬಳಿ ಆನೆ ದಾಳಿಗೆ ಕೃಷಿ ಕಾರ್ಮಿಕ ಕುಮಾರ (40) ಭಾನುವಾರ ಮೃತಪಟ್ಟಿದ್ದಾರೆ.

‘ಹೇಮಾವತಿ ಅಣೆಕಟ್ಟೆಯ ಹಿನ್ನೀರಿನ ಖಾಲಿ ಪ್ರದೇಶದಲ್ಲಿ ಭತ್ತ ನಾಟಿ ಮಾಡುತ್ತಿದ್ದ ಕುಮಾರ ಹಾಗೂ ದೊಡ್ಡಯ್ಯ ಅವರ ಮೇಲೆ ಕರಿಕಡ್ಡಿ ಕಾಡಿನಿಂದ ಬಂದ ಆನೆ ದಾಳಿ ನಡೆಸಿದೆ. ದೊಡ್ಡಯ್ಯ ಓಡಿ ಹೋದರೆ, ಕುಮಾರ ಆನೆ ದಾಳಿಗೆ ಸಿಲುಕಿ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಮಾವತಿ ಅಣೆಕಟ್ಟೆಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ, ಹಿನ್ನೀರಿನಲ್ಲಿ ಕೃಷಿ ಚಟುವಟಿಕೆಗಳನ್ನು ರೈತರು ಆರಂಭಿಸುತ್ತಾರೆ. ಸಮೀಪದಲ್ಲೇ ಅರಣ್ಯ ಇರುವುದರಿಂದ ಕಾಡಾನೆಗಳು ನೀರು ಕುಡಿಯಲೆಂದು ಆಗಾಗ ಇಲ್ಲಿಗೆ ಬರುತ್ತವೆ.

ADVERTISEMENT

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.