ADVERTISEMENT

ರಾಣಿ ಮಾಚಯ್ಯ ಅವರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 10:49 IST
Last Updated 3 ಫೆಬ್ರುವರಿ 2023, 10:49 IST
   

ಮಡಿಕೇರಿ: ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟದ ವತಿಯಿಂದ‌ ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ ಅವರನ್ನು ನಗರದಲ್ಲಿ‌ ಶುಕ್ರವಾರ ಸನ್ಮಾನಿಸಲಾಯಿತು.


ಇದಕ್ಕೂ ಮುನ್ನ ಅವರನ್ನು ನಗರದ ಎ.ವಿ.ಶಾಲೆಯಿಂದ ಮೆರವಣಿಗೆಯ ಮೂಲಕ‌‌ ಕೊಡವ ಸಮಾಜಕ್ಕೆ ಕರೆ ತರಲಾಯಿತು. ಉಮ್ಮತ್ತಾಟ್ ನೃತ್ಯದ ಮೂಲಕ ಅವರಿಗೆ ಸ್ವಾಗತ ಕೋರಲಾಯಿತು.


ಕೊಡವ ಸಮಾಜದ ಪ್ರಮುಖರಾದ ಎಂ.ಸಿ.ನಾಣಯ್ಯ, ವೀಣಾ ಅಚ್ಚಯ್ಯ, ಅನಿತಾ ಪೂವಯ್ಯ, ನಾಪಂಡ ರವಿ ಕಾಳಪ್ಪ, ಎಂ.ಪಿ.ಮುತ್ತಪ್ಪ, ಸುನಿಲ್ ಸುಬ್ರಹ್ಮಣ್ಯ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.