ADVERTISEMENT

ಹಾಸನದ ‘ಕರಡಿ’ ದುಬಾರೆಗೆ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 16:26 IST
Last Updated 18 ಏಪ್ರಿಲ್ 2024, 16:26 IST

ಮಡಿಕೇರಿ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಗುರುವಾರ ಸೆರೆ ಹಿಡಿಯಲಾದ ಕಾಡಾನೆ ‘ಕರಡಿ’ಯನ್ನು ಇಲ್ಲಿನ ದುಬಾರೆ ಸಾಕಾನೆ ಶಿಬಿರಕ್ಕೆ ತರಲಾಗಿದೆ.

ಕಾಡಾನೆಯನ್ನು ಸೆರೆ ಹಿಡಿಯಲು ಇಲ್ಲಿನ ಶಿಬಿರದಿಂದ ಒಟ್ಟು 4 ಸಾಕನೆಗಳು ತೆರಳಿದ್ದವು. ಈ ಆನೆಗಳ ಜೊತೆಗೆ ರಾಜ್ಯ ಇತರೆ ಭಾಗಗಳಿಂದ ಬಂದಿದ್ದ 4 ಸಾಕಾನೆಗಳ ಸಹಾಯದಿಂದ ಈ ಕಾಡಾನೆಯನ್ನು ಸೆರೆ ಹಿಡಿಯಲಾಯಿತು.

ಈ ಕಾಡಾನೆ ದಾಳಿ ಸಿಲುಕಿ ಮತ್ತಾವರ ಗ್ರಾಮದಲ್ಲಿ ವಸಂತ ಎಂಬುವವರು ಜನವರಿಯಲ್ಲಿ ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.