ಮಡಿಕೇರಿ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಗುರುವಾರ ಸೆರೆ ಹಿಡಿಯಲಾದ ಕಾಡಾನೆ ‘ಕರಡಿ’ಯನ್ನು ಇಲ್ಲಿನ ದುಬಾರೆ ಸಾಕಾನೆ ಶಿಬಿರಕ್ಕೆ ತರಲಾಗಿದೆ.
ಕಾಡಾನೆಯನ್ನು ಸೆರೆ ಹಿಡಿಯಲು ಇಲ್ಲಿನ ಶಿಬಿರದಿಂದ ಒಟ್ಟು 4 ಸಾಕನೆಗಳು ತೆರಳಿದ್ದವು. ಈ ಆನೆಗಳ ಜೊತೆಗೆ ರಾಜ್ಯ ಇತರೆ ಭಾಗಗಳಿಂದ ಬಂದಿದ್ದ 4 ಸಾಕಾನೆಗಳ ಸಹಾಯದಿಂದ ಈ ಕಾಡಾನೆಯನ್ನು ಸೆರೆ ಹಿಡಿಯಲಾಯಿತು.
ಈ ಕಾಡಾನೆ ದಾಳಿ ಸಿಲುಕಿ ಮತ್ತಾವರ ಗ್ರಾಮದಲ್ಲಿ ವಸಂತ ಎಂಬುವವರು ಜನವರಿಯಲ್ಲಿ ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.