ADVERTISEMENT

ಅಪಘಾತ: ಕಾಡು ಬೆಕ್ಕು ಸಾವು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 13:56 IST
Last Updated 1 ಫೆಬ್ರುವರಿ 2020, 13:56 IST
ಮಡಿಕೇರಿಯ ಆರ್ಮಿ ಕ್ಯಾಂಟೀನ್ ಬಳಿ ಶನಿವಾರ ಅಪಘಾತಕ್ಕೆ ಸಿಲುಕಿ ಸಾವನ್ನಾಪ್ಪಿರುವ ಕಾಡು ಬೆಕ್ಕು
ಮಡಿಕೇರಿಯ ಆರ್ಮಿ ಕ್ಯಾಂಟೀನ್ ಬಳಿ ಶನಿವಾರ ಅಪಘಾತಕ್ಕೆ ಸಿಲುಕಿ ಸಾವನ್ನಾಪ್ಪಿರುವ ಕಾಡು ಬೆಕ್ಕು   

ಮಡಿಕೇರಿ: ನಗರದ ಸೇನಾ ಕ್ಯಾಂಟೀನ್ ಬಳಿ ಶನಿವಾರ ಬೆಳಿಗ್ಗೆ ಚಿರತೆಯನ್ನು ಹೋಲುವ ಕಾಡು ಬೆಕ್ಕು ವಾಹನ ಅಪಘಾತದಿಂದ ಸಾವನ್ನಪ್ಪಿದೆ.

ರಾತ್ರಿಯೇ ವಾಹನಕ್ಕೆ ಸಿಲುಕಿ ಕಾಡುಬೆಕ್ಕು ಸಾವನ್ನಪ್ಪಿತ್ತು. ಬೆಳಿಗ್ಗೆ ಸ್ಥಳೀಯರಿಗೆ ಇದನ್ನು ಗಮನಿಸಿ ಚಿರತೆಯ ಮರಿಯೇ ಸಾವನ್ನಪ್ಪಿದೆ ಭಾವಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಅಪರಿಚಿತರೊಬ್ಬರು ಈ ಪ್ರಾಣಿಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಬಳಿಕ ಅರಣ್ಯ ಇಲಾಖೆ ಈ ಬಗ್ಗೆ ಮಾಹಿತಿ ಪಡೆದು ಬೆಕ್ಕನ್ನು ವಶಕ್ಕೆ ಪಡೆದುಕೊಂಡಿದೆ.

ADVERTISEMENT

ಕಳೆದ ತಿಂಗಳು ಕಾಡುಬೆಕ್ಕುಗಳ ಗುಂಪು ನೆಹರೂ ಮಂಟಪದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.