ಗೋಣಿಕೊಪ್ಪಲು: ಇಲ್ಲಿನ ಅರುವತ್ತೊಕ್ಕಲು ನಿವಾಸಿ ಉಳುವಂಗಡ ಗೌತಮ್ (30) ಆತ್ಮಹತ್ಯೆ ಮಾಡಿಕೊಂಡಿದ್ದು, ಶವದೊಂದಿಗೆ ಆತನ ತಾಯಿ ಆರು ದಿನ ಕಾಲ ಕಳೆದಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮೃತ ಗೌತಮ್ ತಾಯಿ ಕಮಲ ಮಾನಸಿಕ ಅಸ್ವಸ್ತೆಯಾಗಿದ್ದು,ಮಗ ಸತ್ತಿರುವುದು ಅವರ ಅರಿವಿಗೆ ಬಂದಿಲ್ಲ. ಹೀಗಾಗಿ ಮಗನ ಶವದೊಂದಿಗೆ ಮನೆಯಲ್ಲಿಯೇ ಕಾಲ ಕಳೆದಿದ್ದಾರೆ.
ಖಾಸಗಿ ಬಸ್ ಚಾಲಕ ವೃತ್ತಿ ಮಾಡುತ್ತಿದ್ದ ಗೌತಮ್ ಏ.14ರಂದು ವಿಷ ಸೇವಿಸಿ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ವಿಶು ಹಬ್ಬಕ್ಕೆ ತೆರಳಿದ್ದ ಪಕ್ಕದ ಮನೆಯವರು ಶುಕ್ರವಾರ ಸಂಜೆ ಬಂದು ಗಮನಿಸಿದಾಗ ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.