ADVERTISEMENT

ಸಿದ್ದಾಪುರ: ಅರಿವಳಿಕೆ ಚುಚ್ಚುಮದ್ದು ಮೈಗೆ ಚುಚ್ಚಿದರೂ ತಪ್ಪಿಸಿಕೊಂಡ ಹುಲಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 14:40 IST
Last Updated 15 ಸೆಪ್ಟೆಂಬರ್ 2022, 14:40 IST
   

ಸಿದ್ದಾಪುರ (ಕೊಡಗು ಜಿಲ್ಲೆ): ಇಲ್ಲಿನ ಮಾಲ್ದಾರೆ ಭಾಗದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದ ಹುಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಅರಿವಳಿಕೆ ಚುಚ್ಚುಮದ್ದು ನೀಡಿದರಾದರೂ ಹುಲಿ ತಪ್ಪಿಸಿಕೊಂಡಿದೆ.

ಅರಿವಳಿಕೆ ಚುಚ್ಚುಮದ್ದು ಮೈಗೆ ಚುಚ್ಚಿದರೂ ಹುಲಿ ಪರಾರಿಯಾಗಿದೆ. ಅದು ಓಡಿದ ಕಡೆಯಲೆಲ್ಲ ಸಿಬ್ಬಂದಿ ಹುಡುಕಾಟ ನಡೆಸಿದರೂ ಹುಲಿ ಪತ್ತೆಯಾಗಿಲ್ಲ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ 3 ಜಾನುವಾರುಗಳನ್ನು ಹುಲಿ ಕೊಂದಿದೆ.

ಇಲ್ಲಿನ ಘಟ್ಟದಳ ಖಾಸಗಿ ಕಾಫಿ ತೋಟದಲ್ಲಿ ಜಾನುವಾರುವೊಂದನ್ನು ಕೊಂದು ಕಳೇಬರ ಇರಿಸಿದ್ದ ಜಾಗಕ್ಕೆ ಬುಧವಾರ ರಾತ್ರಿ ಹುಲಿ ಮತ್ತೆ ಬಂದು, ಕಳೇಬರವನ್ನು ಸ್ಪಲ್ಪ ದೂರ ಎಳೆದೋಯ್ದು ತಿಂದು ಪರಾರಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.