ADVERTISEMENT

ವಿರಾಜಪೇಟೆ: ಬೈಲದಂತೆ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 6:04 IST
Last Updated 29 ಜೂನ್ 2025, 6:04 IST
ವಿರಾಜಪೇಟೆಯಲ್ಲಿ ಈಚೆಗೆ ಕೊಡವ ಪೊಮ್ಮಕ್ಕಡ ಒಕ್ಕೂಟ ಘಟಕದ ಸಭೆ ನಡೆಯಿತು.
ವಿರಾಜಪೇಟೆಯಲ್ಲಿ ಈಚೆಗೆ ಕೊಡವ ಪೊಮ್ಮಕ್ಕಡ ಒಕ್ಕೂಟ ಘಟಕದ ಸಭೆ ನಡೆಯಿತು.   

ವಿರಾಜಪೇಟೆ: ‘ಕೊಡವ ಪೊಮ್ಮಕ್ಕಡ ಒಕ್ಕೂಟ ಬೈಲಾವನ್ನು ರಚಿಸಲಾಗಿದ್ದು,  ಅದರಂತೆ ಕಾರ್ಯನಿರ್ವಹಿಸಲಾಗುವುದು’  ಒಕ್ಕೂಟದ ವಿರಾಜಪೇಟೆ ಘಟಕದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್  ಹೇಳಿದರು.

ಪಟ್ಟಣದಲ್ಲಿ ಈಚೆಗೆ ನಡೆದ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿದರು. ‘ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟವು ಇಲ್ಲಿಯ ಕೊಡವ ಸಮಾಜದ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.  ಸಮಾಜದ ಆಡಳಿತ ಮಂಡಳಿಯು ಒಕ್ಕೂಟಕ್ಕೆ ಸಹಕಾರ ನೀಡುತ್ತಿದೆ. ಒಕ್ಕೂಟದಿಂದ  ದಿನಾಚರಣೆ, ಪ್ರಮುಖ ಹಬ್ಬಗಳನ್ನು ಆಚರಿಸಲಾಗುವುದು.  ಸಾಧನೆಮಾಡಿದ ಸಂಘದ ಸದಸ್ಯರನ್ನು ಸನ್ಮಾನಿಸಲಾಗುವುದು ’ ಎಂದರು.

 ಕಾರ್ಯದರ್ಶಿ ಚಿತ್ರಾ ಚರ್ಮಣ, ಸಭೆಯ ಕ್ರಿಯಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಖಜಾಂಚಿ ತಾತಂಡ ಯಶು ಕಬೀರ್ ಲೆಕ್ಕ ಪತ್ರ ಮಂಡಿಸಿದರು. ಕಳೆದ ಬಾರಿಯ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.

ಒಕ್ಕೂಟದ ಜಂಟಿ ಕಾರ್ಯದರ್ಶಿ ಮೂಕೊಂಡ ಪ್ರೀತ್ ಈರಪ್ಪ, ಮುರುವಂಡ ಉಷಾ ನೀಲಕಂಠ , ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT