ADVERTISEMENT

ವಯನಾಡ್‌ ಭೂಕುಸಿತ: ಕೊಡಗಿನ ನಲ್ವತ್ತೇಕರೆಯ ಒಂದೇ ಕುಟುಂಬದ 8 ಮಂದಿ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 16:12 IST
Last Updated 3 ಆಗಸ್ಟ್ 2024, 16:12 IST
<div class="paragraphs"><p>ವಯನಾಡ್‌ ದುರಂತ</p></div>

ವಯನಾಡ್‌ ದುರಂತ

   

ಪಿಟಿಐ

ಸಿದ್ದಾಪುರ (ಕೊಡಗು ಜಿಲ್ಲೆ): ‘ವಯನಾಡ್‌ ಭೂಕುಸಿತ ದುರಂತದ ನಂತರ ನಾಪತ್ತೆಯಾಗಿದ್ದ, ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಮೂಲದ ದಿವ್ಯಾ (35), ಅವರ ಪುತ್ರ ಲಕ್ಷ್ಮೀಶ್‌ ಹಾಗೂ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳು ಶುಕ್ರವಾರ ಪತ್ತೆಯಾಗಿವೆ. ಇನ್ನೊಬ್ಬರು ಪತ್ತೆಯಾಗಿಲ್ಲ’ ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT

ದಿವ್ಯಾ ವಯನಾಡ್‌ನ ಮಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

‘ತಾಯಿ ಹಾಗೂ ಮಗನ ಮೃತದೇಹ ಒಟ್ಟಿಗೇ ಪತ್ತೆಯಾಗಿದ್ದು, ಕರುಳು ಹಿಂಡುವಂತಿದೆ’ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ನೆಲ್ಯಹುದಿಕೇರಿಯ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ ಕೇರಳದ ಚೂರಲ್‌ಮಲದ ಯುವಕನನ್ನು ವಿವಾಹವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.