ADVERTISEMENT

ಮಡಿಕೇರಿ: ನಿತಿನ್ ಗಡ್ಕರಿಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 16:37 IST
Last Updated 9 ಜೂನ್ 2022, 16:37 IST
ಕುಶಾಲನಗರದ ಟೋಲ್ ಗೇಟ್ ಬಳಿ ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬಿಜೆಪಿ ಕಾರ್ಯಕರ್ತರು ಭವ್ಯಸ್ವಾಗತ ನೀಡಿದರು
ಕುಶಾಲನಗರದ ಟೋಲ್ ಗೇಟ್ ಬಳಿ ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬಿಜೆಪಿ ಕಾರ್ಯಕರ್ತರು ಭವ್ಯಸ್ವಾಗತ ನೀಡಿದರು   

ಕುಶಾಲನಗರ: ಕೊಡಗು ಜಿಲ್ಲೆಗೆ ಗುರುವಾರ ಬಂದ ಕೇಂದ್ರ ಭೂಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.

ಕೊಡಗಿನ ಪ್ರಕೃತಿ ಸೌಂದರ್ಯ ಸವಿಯಲು ಗಡ್ಕರಿ ತಮ್ಮ ಕುಟುಂಬ ಸಮೇತರಾಗಿ ಪ್ರವಾಸ ಕೈಗೊಂಡಿದ್ದಾರೆ.

ಸಚಿವರ ಬರುವಿಕೆಯ ಸುಳಿವು ದೊರೆತ ಕೂಡಲೇ ಕೊಡಗು-ಮೈಸೂರು ಗಡಿ ಕಾವೇರಿ ಸೇತುವೆ ಬಳಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಗಡ್ಕರಿ ಅವರಿಗೆ ಹೂಮಾಲೆ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ADVERTISEMENT

ನಗರ ಬಿಜೆಪಿ ಘಟಕದ ಅಧ್ಯಕ್ಷ ಉಮಾಶಂಕರ್, ಪಟ್ಟಣ ಪಂಚಾಯಿತಿ ಸದಸ್ಯೆ ರೂಪಾ ಉಮಾಶಂಕರ್, ಪಕ್ಷದ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಗೌತಮ್, ಇಂದಿರಾ ರಮೇಶ್, ವೇದಾವತಿ, ನವನೀತ್ ಇದ್ದರು.

ಗಡ್ಕರಿ ಇಂದು ಮಡಿಕೇರಿಗೆ: ನಿತಿನ್ ಗಡ್ಕರಿ ವಿರಾಜಪೇಟೆ ಮೂಲಕ ಪಾಲಿಬೆಟ್ಟಕ್ಕೆ ತೆರಳಿದರು. ಅಲ್ಲಿನ ಖಾಸಗಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದು, ಶುಕ್ರವಾರ ಮಡಿಕೇರಿಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.