ADVERTISEMENT

ಕೆಜಿಎಫ್‌: ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 6:11 IST
Last Updated 1 ಡಿಸೆಂಬರ್ 2017, 6:11 IST

ಕೆಜಿಎಫ್:  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮನೆಯ ಭದ್ರತೆಗೆ ನೇಮಿಸಲಾಗಿದ್ದರೂ ಗೈರು ಹಾಜರಾದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಗುರುವಾರ ಅಮಾನತ್ತುಗೊಳಿಸಲಾಗಿದೆ.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಗೆ ಸೇರಿದ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಮುಖ್ಯ ಪೇದೆ ರಿಯಾಜ್‌ ಪಾಷಾ ಮತ್ತು ಪೇದೆ ಶಶಿಧರ್‌ ಮನೆಯ ಭದ್ರತೆಗೆ ಎಂದು ನೇಮಿಸಿದ್ದರೂ, ಕಾರಣ ಕೊಡದೆ ಗೈರು ಹಾಜರಾಗಿದ್ದರು.

ಸರ್ಕಲ್‌ ಇನ್‌ಸ್ಪೆಕ್ಟರ್ ಮುಸ್ತಾಕ್‌ ಪಾಷಾ ನೀಡಿದ ವರದಿಯ ಪ್ರಕಾರ ಇಬ್ಬರನ್ನೂ ಅಶಿಸ್ತು, ದುರ್ನಡತೆ ಮತ್ತು ನಿರ್ಲಕ್ಷ್ಯತೆ ಆರೋಪದ ಮೇರೆಗೆ ಗುರುವಾರ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶ್‌ ಕುಮಾರ್ ಆದೇಶ ಹೊರಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.