ಕೋಲಾರ: ಡಾ.ಬಿ.ಆರ್.ಅಂಬೇಡ್ಕರ ಪರಿನಿರ್ವಾಣ ದಿನವಾದ ಶುಕ್ರವಾರ ನಗರದ 1ನೇ ವಾರ್ಡ್ಗೆ ಸೇರಿದ ಟಮಕ ಬಡಾವಣೆಯ ಮೂಲೆಯೊಂದರಲ್ಲಿ ಕಂಡ ದೃಶ್ಯವಿದು.
ಕುಂಟೆಯಂತೆ ಕಾಣುವ ಸ್ಥಳದಲ್ಲಿ ಅಂಬೇಡ್ಕರ್ ಭಾವಚಿತ್ರವುಳ್ಳ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಆ ಹಳ್ಳದಲ್ಲಿ ಮಳೆ ನೀರು ತುಂಬಿ ಪಾಚಿ ಕಟ್ಟಿದೆ. ತೆರೆದ ಕಸದ ತೊಟ್ಟಿಯಾಗಿರುವ ಸ್ಥಳದಲ್ಲೇ ಅಂಬೇಡ್ಕರರ ಚಿತ್ರವುಳ್ಳ ಕಲ್ಲು ಅದನ್ನು ನೆಟ್ಟವರ ನಿರ್ಲಕ್ಷ್ಯ ಧೋರಣೆಯ ಕಡೆಗೂ ಗಮನ ಸೆಳೆಯುತ್ತಿದೆ ಎಂಬುದು ಕೆಲವು ಸ್ಥಳೀಯರ ಅಸಮಾಧಾನದ ನುಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.