ಕೋಲಾರ: ಡಾ.ಬಿ.ಆರ್.ಅಂಬೇಡ್ಕರ ಪರಿನಿರ್ವಾಣ ದಿನವಾದ ಶುಕ್ರವಾರ ನಗರದ 1ನೇ ವಾರ್ಡ್ಗೆ ಸೇರಿದ ಟಮಕ ಬಡಾವಣೆಯ ಮೂಲೆಯೊಂದರಲ್ಲಿ ಕಂಡ ದೃಶ್ಯವಿದು.
ಕುಂಟೆಯಂತೆ ಕಾಣುವ ಸ್ಥಳದಲ್ಲಿ ಅಂಬೇಡ್ಕರ್ ಭಾವಚಿತ್ರವುಳ್ಳ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಆ ಹಳ್ಳದಲ್ಲಿ ಮಳೆ ನೀರು ತುಂಬಿ ಪಾಚಿ ಕಟ್ಟಿದೆ. ತೆರೆದ ಕಸದ ತೊಟ್ಟಿಯಾಗಿರುವ ಸ್ಥಳದಲ್ಲೇ ಅಂಬೇಡ್ಕರರ ಚಿತ್ರವುಳ್ಳ ಕಲ್ಲು ಅದನ್ನು ನೆಟ್ಟವರ ನಿರ್ಲಕ್ಷ್ಯ ಧೋರಣೆಯ ಕಡೆಗೂ ಗಮನ ಸೆಳೆಯುತ್ತಿದೆ ಎಂಬುದು ಕೆಲವು ಸ್ಥಳೀಯರ ಅಸಮಾಧಾನದ ನುಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.