ADVERTISEMENT

ಅಪಘಾತ: ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:14 IST
Last Updated 26 ಸೆಪ್ಟೆಂಬರ್ 2020, 2:14 IST
ಕೋಲಾರ ತಾಲ್ಲೂಕಿನ ಕುರುಗಲ್‌ ಗೇಟ್‌ ಬಳಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ಕಾರು
ಕೋಲಾರ ತಾಲ್ಲೂಕಿನ ಕುರುಗಲ್‌ ಗೇಟ್‌ ಬಳಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ಕಾರು   

ಕೋಲಾರ: ತಾಲ್ಲೂಕಿನ ಕುರುಗಲ್‌ ಗೇಟ್‌ ಬಳಿ ಶುಕ್ರವಾರ ಕಾರಿಗೆ ಬೈಕ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ರಾಮಚಂದ್ರಪ್ಪ (52) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಸಾಹುಕಾರ್‌ ಚೆಟ್ಟಿಹಳ್ಳಿ ನಿವಾಸಿಯಾದ ರಾಮಚಂದ್ರಪ್ಪ ಅವರು ಬೆಸ್ಕಾಂನಲ್ಲಿ ಮೀಟರ್‌ ರೀಡಿಂಗ್‌ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಬೈಕ್‌ನಲ್ಲಿ ವೇಮಗಲ್‌ನಿಂದ ಕುರುಗಲ್‌ಗೆ ಬರುತ್ತಿದ್ದಾಗ ಅಪಘಾತವಾಗಿದೆ.

ಅಪಘಾತಕ್ಕೀಡಾಗಿರುವ ಕಾರು ಆರೋಗ್ಯ ಇಲಾಖೆಗೆ ಸೇರಿದೆ. ವೇಮಗಲ್ ಠಾಣೆ ಪೊಲೀಸರು ಕಾರು ಚಾಲಕನನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.