ADVERTISEMENT

ವಿಜಯ ಯಾತ್ರೆಗೆ ನೆರವು: ಜೂ. 10ಕ್ಕೆ ಶೃಂಗೇರಿ ಶ್ರೀ ಆಗಮನ

​ಪ್ರಜಾವಾಣಿ ವಾರ್ತೆ
Published 30 ಮೇ 2022, 4:41 IST
Last Updated 30 ಮೇ 2022, 4:41 IST
ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರ ವಿಜಯ ಯಾತ್ರೆಯು ಕೋಲಾರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮಕ್ಕೆ ಸಂಸದ ಎಸ್. ಮುನಿಸ್ವಾಮಿ ಆರ್ಥಿಕ ನೆರವು ನೀಡಿದರು
ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರ ವಿಜಯ ಯಾತ್ರೆಯು ಕೋಲಾರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮಕ್ಕೆ ಸಂಸದ ಎಸ್. ಮುನಿಸ್ವಾಮಿ ಆರ್ಥಿಕ ನೆರವು ನೀಡಿದರು   

ಕೋಲಾರ: ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರ ವಿಜಯ ಯಾತ್ರೆಯು ನಗರಕ್ಕೆ ಜೂನ್‌ 10ರಂದು ಆಗಮಿಸಲಿದ್ದು, ಅದ್ದೂರಿ ಕಾರ್ಯಕ್ರಮಕ್ಕೆ ಸಂಸದ ಎಸ್. ಮುನಿಸ್ವಾಮಿ ₹ 2 ಲಕ್ಷ ನೆರವು ನೀಡಿದರು.

ಸ್ವಾಮೀಜಿ ಅವರು ಬರುವ ಹಿನ್ನೆಲೆಯಲ್ಲಿ ಶಂಕರಮಠದಲ್ಲಿ ನಡೆದ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಸಂಸದರು ಶಾರದಾ ಮಾತೆ, ಶಂಕರಾಚಾರ್ಯರ ಪೂಜೆಯಲ್ಲಿ ಪಾಲ್ಗೊಂಡು ಶ್ರೀಗಳ ವಿಜಯ ಯಾತ್ರೆಗೆ ನೆರವಿನ ಚೆಕ್‍ ಅನ್ನು ಶಂಕರ ಸೇವಾ ಸಮಿತಿ ಅಧ್ಯಕ್ಷ ಕಾರ್ತಿಕ್ ಕೃಷ್ಣಮೂರ್ತಿ ಹಾಗೂ ಮಠದ ಧರ್ಮಾಧಿಕಾರಿ ಜೆ.ಎನ್. ರಾಮಕೃಷ್ಣ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ‘ಶೃಂಗೇರಿ ಶ್ರೀಗಳು ಕೋಲಾರಕ್ಕೆ ಬರುತ್ತಿರುವುದು ಸೌಭಾಗ್ಯ. ಅವರನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಸ್ವಾಗತಿಸಲು ಶಂಕರ ಸೇವಾ ಸಮಿತಿ ಕೈಗೊಂಡಿರುವ ಎಲ್ಲಾ ಕಾರ್ಯಗಳಿಗೂ ತಾವು ಸಹಕಾರ ನೀಡುತ್ತೇನೆ’
ಎಂದರು.

ADVERTISEMENT

ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್ ಗೌಡ, ಸತ್ಯನಾರಾಯಣರಾವ್, ಮಠದ ಅಧ್ಯಕ್ಷ ಕಾರ್ತಿಕ್ ಕೃಷ್ಣಮೂರ್ತಿ, ಧರ್ಮಾಧಿಕಾರಿ ಜೆ.ಎನ್. ರಾಮಕೃಷ್ಣ, ಮುರಳಿ ಸುಂದರ್, ಚಂದ್ರಪ್ರಕಾಶ್, ಉದಯ ಕುಮಾರ್, ಅಪ್ಪಣ್ಣ ಶಾಸ್ತ್ರಿ, ಸುರೇಶ್ ಶರ್ಮಾ, ಜಯಶ್ರೀ, ಡಾ.ಎಂ.ವಿ. ಜಯರಾಮ್, ಮಂಜುನಾಥ ದೀಕ್ಷಿತ್, ನಂಜುಂಡಯ್ಯ ಶ್ರೇಷ್ಠಿ, ರಾಘವಯ್ಯ ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.