ಮುಳಬಾಗಿಲು: ಹಜರತ್ ಖ್ವಾಜಾ ಗರೀಬ್ ನವಾಜ್ ಅಜ್ಮೇರಿ ಚಿಸ್ಟಿ ರಹಮತುಲ್ಲಾ ಅಲೈ ಅವರ ಬಗ್ಗೆ ನ್ಯೂಸ್ 18 ಆ್ಯಂಕರ್ ಅಮೇಶ್ ದೇವಗನ್ ಎಂಬುವವರು ಅವಹೇಳನಕರವಾಗಿ ಮಾತನಾಡಿರುವುದನ್ನು ಖಂಡಿಸಿ ದರ್ಗಾ ಹಜರತ್ ಬಾಬಾ ಹೈದರ್ ಅವೌಲಿಯ ಸಮಿತಿ ಸದಸ್ಯರು ಶನಿವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಚಾನಲ್ರವರು ಲುಟೀರಾ ಚಿಸ್ಟಿ ಅಖಂಕರ ಚಸ್ಟಿ ಎಂದು ಅವಹೇಳನಕಾರಿಯಾಗಿ ಮಾತನಾಡಿರುವುದು ಅಲ್ಪಸಂಖ್ಯಾತ ಮಹಮ್ಮದೀಯರಿಗೆ ನೋವನ್ನುಂಟುಮಾಡಿದೆ, ಇಂದು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದ ಸಮಿತಿ ಸದಸ್ಯರುಗಳು ಮತೀಯ ಗಲಭೆಗಳನ್ನು ಸೃಷ್ಟಿಸುವ ಪ್ರಚೋದನಾಕಾರಿ ಹೇಳಿಕೆ ನೀಡಿರುವ ನ್ಯೂಸ್ 18 ರ ಅಕ್ಯಂಕರ್ ಆದ ಅಮೀಶ್ದೇವಗನ್ ರವರನ್ನು ಕೂಡಲೇ ಬಂಧಿಸಿ, ಹುದ್ದೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಸಮಿತಿಯ ಅಧ್ಯಕ್ಷ ಸಿ.ಕೆ.ಪಯಾಜ್ಅಹಮದ್, ಉಪಾಧ್ಯಕ್ಷ ಅಲ್ಪತ್ಪಾಷ, ವಕೀಲ ಸಿ.ಎಂ.ನಯಾಜ್ಅಹಮದ್, ಜಬರ್ಉಲ್ರೆಹಮಾನ್, ಮುಜಾಮಿಲ್,ಚಾಂದ್ಪಾಷ, ನಗರಸಭೆ ಸದಸ್ಯರಾದ ಅಸ್ಲಂಪಾಶ, ಮಹಮದ್ಷಫಿಉಲ್ಲಾ, ದಸಂಸ ಮುಖಂಡ ಸತೀಶ್,ಅಜಾಜ್ಅಹಮದ್, ನಗರಸಭೆ ಮಾಜಿ ಸದಸ್ಯ ಅಬಾಸ್ಖಾನ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.