ಕೆಜಿಎಫ್: ಕೋವಿಡ್-19 ನಿಂದ ಬಾಧಿತರಾಗಿದ್ದ ಬೈನೇನಹಳ್ಳಿಯ ಯುವಕ ಗುಣಮುಖರಾಗಿದ್ದರಿಂದ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ವಿ.ಕೋಟೆಯ ಕೊರೊನಾ ಸೋಂಕು ಇದ್ದ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದ ಕಾರಣ ಸೋಂಕು ಕಾಣಿಸಿಕೊಂಡಿತ್ತು. ತಾಲ್ಲೂಕಿನಲ್ಲಿ ಸೋಂಕು ತಗುಲಿದ ಮೊದಲ ವ್ಯಕ್ತಿಗಿದ್ದರು. ಗಣಿ ಕಳ್ಳತನದ ಮೇಲೆ ಬಂಧಿತನಾಗಿರುವ ಸುಸೈಪಾಳ್ಯ ನಿವಾಸಿ ಈಗಾಗಲೇ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ತಮಿಳುನಾಡಿನಿಂದ ಬಂದು ಇಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಸೋಂಕು ಕಾಣಿಸಿಕೊಂಡ ವ್ಯಕ್ತಿ ಕೋಲಾರದ ಕೋವಿಡ್– 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.