ADVERTISEMENT

ಮುಳಬಾಗಿಲು: ಸಿಲಿಂಡರ್ ಸಿಡಿದು ಇಬ್ಬರಿಗೆ ಗಾಯ, ಮೂರು ಮನೆ ಜಖಂ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 1:46 IST
Last Updated 6 ನವೆಂಬರ್ 2020, 1:46 IST
ಮುಳಬಾಗಿಲು ನಗರದ ಮೆಹಬೂಬ್‌ನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸಿಡಿದು ಅಕ್ಕಪಕ್ಕದ ಮನೆಗಳು ಜಖಂಗೊಂಡಿದ್ದು, ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿದರು
ಮುಳಬಾಗಿಲು ನಗರದ ಮೆಹಬೂಬ್‌ನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸಿಡಿದು ಅಕ್ಕಪಕ್ಕದ ಮನೆಗಳು ಜಖಂಗೊಂಡಿದ್ದು, ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿದರು   

ಮುಳಬಾಗಿಲು: ನಗರದ ಮೆಹಬೂಬ್‌ ನಗರದಲ್ಲಿ ಗುರುವಾರ ಬೆಳಿಗ್ಗೆ ಅಡುಗೆ ಅನಿಲ ಸಿಲಿಂಡರ್ ಸಿಡಿದು ತಾಯಿ ಮತ್ತು ಮಗು ತೀವ್ರವಾಗಿ ಗಾಯಗೊಂಡಿದ್ದು, ಮೂರು ಮನೆಗಳು ಜಖಂಗೊಂಡಿವೆ.

ನಾಗಮ್ಮ (46) ಹಾಗೂ ಅವರು ಸಾಕಿಕೊಂಡಿದ್ದ ತನುಷ್(4) ಗಾಯಗೊಂಡಿದ್ದು, ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಗಮ್ಮ ಅವರ ಮನೆ ಸೇರಿದಂತೆ ಪಕ್ಕದ ಸಾಕಮ್ಮ ಮತ್ತು ಸುಹೇಲ್ ಅವರ ಮನೆಗಳು ಜಖಂಗೊಂಡಿವೆ. ಖಾದರ್‌ ಬಾಷಾ ಎಂಬುವರ ಮನೆ ಕಾಂಪೌಂಡ್ ಹಾಳಾಗಿದೆ. ಬುಧವಾರ ಸಂಜೆಯಷ್ಟೇ ಹೊಸ ಗ್ಯಾಸ್ ತರಿಸಿದ್ದರು ಎನ್ನಲಾಗಿದೆ. ಮನೆಯಲ್ಲಿ ಅವರಿಬ್ಬರೇ ವಾಸವಾಗಿದ್ದರು.

ADVERTISEMENT

ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಮತ್ತು ಕಂದಾಯ ನಿರೀಕ್ಷಕ ಸಾದತ್‌ ಉಲ್ಲಾಖಾನ್ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುಗಳಿಗೆ ನೆರವು ನೀಡಲು ಗ್ಯಾಸ್‌ ಏಜೆನ್ಸಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.