ADVERTISEMENT

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 15:01 IST
Last Updated 18 ನವೆಂಬರ್ 2020, 15:01 IST

ಕೋಲಾರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 21 ಮಂದಿಯನ್ನು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವೈದ್ಯಕೀಯ ಕ್ಷೇತ್ರದಿಂದ ಕೋಲಾರದ ವೈದ್ಯ ಡಾ.ವಿ.ಎಸ್.ಕೃಷ್ಣಮೂರ್ತಿ, ಸಮಾಜ ಸೇವೆಗೆ ಕೋಲಾರದ ಸಾ.ಮಾ.ರಂಗಪ್ಪ, ಶಿಲ್ಪಕಲೆ ಕ್ಷೇತ್ರದಿಂದ ಮಾಲೂರು ತಾಲ್ಲೂಕಿನ ಶಿಲ್ಪಿ ಎಸ್‌.ಎಸ್‌.ಮಹಾದೇವ ಪಂಚಾಲ್‌ ಹಾಗೂ ಶಿಲ್ಪಿ ಪೂರ್ಣಚಂದ್ರ, ಕನ್ನಡಪರ ಹೋರಾಟಗಾರರಾದ ಬಂಗಾರಪೇಟೆಯ ರಂಗರಾಮಯ್ಯ ಮತ್ತು ಕೋಲಾರದ ಟಿ.ಶ್ರೀನಿವಾಸ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದಿಂದ ಕೋಲಾರದ ನಾರಾಯಣಪ್ಪ ಮತ್ತು ಶ್ರೀನಿವಾಸಪುರದ ಶ್ರೀರಾಮರೆಡ್ಡಿ, ಸಂಗೀತ ಕ್ಷೇತ್ರದಿಂದ ಮಾಲೂರಿನ ರಾಮಮೂರ್ತಿ, ಸಾಹಿತ್ಯ ಕ್ಷೇತ್ರದಿಂದ ಮಾಲೂರಿನ ತಮ್ಮಯ್ಯ ಮತ್ತು ಕೋಲಾರದ ಕೆ.ಆರ್‌.ಜಯಶ್ರೀ, ಸಮಾಜ ಸೇವೆಗೆ ಬಿ.ಆರ್‌.ಶ್ರೀನಿವಾಸಮೂರ್ತಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ADVERTISEMENT

ಪತ್ರಿಕೋದ್ಯಮ ಕ್ಷೇತ್ರದಿಂದ ಕೆಜಿಎಫ್‌ನ ಎನ್‌.ಆರ್‌.ಪುರುಷೋತ್ತಮ್‌ ಮತ್ತು ಕೋಲಾರದ ಅನಂತರಾಮ್‌, ಜನಪದ ಕಲಾವಿದ ಮುಳಬಾಗಿಲಿನ ಬಾಲಕೃಷ್ಣಪ್ಪ, ಶಾಸನ ಸಂಶೋಧಕ ಮುಳಬಾಗಿಲಿನ ಕೆ.ಆರ್‌.ನರಸಿಂಹನ್‌. ಕ್ರೀಡಾ ಕ್ಷೇತ್ರದಿಂದ ಕೋಲಾರದ ಅಂಚೆ ಅಶ್ವತ್ಥ್‌, ಅಂಕಣಕಾರ ಕೋಲಾರದ ಡಿ.ಎಸ್.ಶ್ರೀನಿವಾಸಪ್ರಸಾದ್‌, ರಂಗಕರ್ಮಿ ಮುದುವಾಡಿಯ ಕೆ.ಎಂ.ಕೃಷ್ಣಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡಪರ ಚಟುವಟಿಕೆಗಾಗಿ ಕೋಲಾರದ ಕನ್ನಡ ಪಕ್ಷಕ್ಕೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಾಗಿ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.