ADVERTISEMENT

ಮೊಬೈಲ್: ಆರೋಗ್ಯದ ಮೇಲೆ ಪರಿಣಾಮ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 14:41 IST
Last Updated 1 ಮಾರ್ಚ್ 2020, 14:41 IST
ಕೋಲಾರದಲ್ಲಿ ಆನ್ವಿ ಹಿಯರಿಂಗ್ ಸೊಲ್ಯೂಷನ್ಸ್ ವತಿಯಿಂದ ಭಾನುವಾರ ಉಚಿತ ಶ್ರವಣ ದೋಷ ತಪಾಸಣೆ ಶಿಬಿರ ನಡೆಯಿತು.
ಕೋಲಾರದಲ್ಲಿ ಆನ್ವಿ ಹಿಯರಿಂಗ್ ಸೊಲ್ಯೂಷನ್ಸ್ ವತಿಯಿಂದ ಭಾನುವಾರ ಉಚಿತ ಶ್ರವಣ ದೋಷ ತಪಾಸಣೆ ಶಿಬಿರ ನಡೆಯಿತು.   

ಕೋಲಾರ: ಆನ್ವಿ ಹಿಯರಿಂಗ್ ಸೊಲ್ಯೂಷನ್ಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಶ್ರವಣ ದೋಷ ಚಿಕಿತ್ಸಾ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು.

ನಗರ ಸೇರಿದಂತೆ ಜಿಲ್ಲೆಯ ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು ಹಾಗೂ ಮುಳಬಾಗಿಲು ತಾಲ್ಲೂಕುಗಳಿಂದ ಶ್ರವಣ ದೋಷವುಳ್ಳವರು ಅಗಮಿಸಿ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡರು.

ವೃದ್ದರು, ಮಹಿಳೆಯರು ಅಲ್ಲದೆ ಮಕ್ಕಳು ಪಾಲ್ಗೊಂಡು ಚಿಕಿತ್ಸೆ ಶ್ರವಣ ದೋಷದ ಬಗ್ಗೆ ಯಂತ್ರೋಪಕರಣಗಳಿಂದ ತಪಾಸಣೆ ಮಾಡಿಸಿಕೊಂಡರು. ಕೆಲವರಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಶಾಖೆಗೆ ಬರಲು ತಜ್ಞರು ಸೂಚಿಸಿದರು. ಅಗತ್ಯವಾದ ಉಪಕರಣೆಗಳನ್ನು ರಿಯಾಯಿತಿ ದರದಲ್ಲಿ ನೀಡಿದರು.

ADVERTISEMENT

ಶಿಬಿರಕ್ಕೆ ಚಾಲನೆ ನೀಡಿದ ರಾಜ್ಯ ಸರಕು ಮತ್ತು ಖರೀದಿದಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು ಮಾತನಾಡಿ, ‘ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

‘ಹುಟ್ಟು ಕಿವುಡರಿಗಿಂತ ಮೊಬೈಲ್ ಬಳಕೆಯಿಂದ ಕಿವುಡರ ಸಂಖ್ಯೆ ಹೆಚ್ಚಾಗುತ್ತಿದೆ. ಅತಿಯಾದ ಬಳಕೆಯಿಂದ ಚಿಕ್ಕ ವಯಸ್ಸಿಗೆ ಕಿವುಡರಾಗುತ್ತಿದ್ದಾರೆ. ಅಗತ್ಯ ಮೀರಿ ಬಳಕೆ ಮಾಡುವುದು ಸೂಕ್ತವಲ್ಲ’ ಎಂದರು.

ಶಿಬಿರದಲ್ಲಿ ಶ್ರವಣ ದೋಷ ತಜ್ಞ ಡಾ.ನಿರಂಜನ್, ತಾಂತ್ರಿಕ ತಜ್ಞರಾದ ಯಶಸ್ವಿನಿ, ನೀತೂ, ಪರಾಕ್ಷ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.