ADVERTISEMENT

ನಾಯಿ ಸ್ಮಾರಕದ ಶಿಲಾಶಾಸನ ಪತ್ತೆ

ಜಿ.ವಿ.ಪುರುಷೋತ್ತಮರಾವ್
Published 1 ಜುಲೈ 2021, 5:00 IST
Last Updated 1 ಜುಲೈ 2021, 5:00 IST
ಬೆಂಗಳೂರು ನಗರದ ಶಾಸನ ಸಂಶೋಧನೆ ಮಾಡುವ ಹವ್ಯಾಸಿ ತಂಡಕ್ಕೆ ಬುಧವಾರ ಮುಳಬಾಗಿಲು ತಾಲ್ಲೂಕಿನ ಮೇಲಾಗಾಣಿ ಗ್ರಾಮದಲ್ಲಿ ‘ಲೋಗ’ನೆಂಬ ನಾಯಿ ಸ್ಮಾರಕಕ್ಕೆ ಸಂಬಂಧಿಸಿದ ಇದುವರೆವಿಗೂ ಬೆಳಕಿಗೆ ಬಾರದ ಶಿಲಾಶಾಸನ
ಬೆಂಗಳೂರು ನಗರದ ಶಾಸನ ಸಂಶೋಧನೆ ಮಾಡುವ ಹವ್ಯಾಸಿ ತಂಡಕ್ಕೆ ಬುಧವಾರ ಮುಳಬಾಗಿಲು ತಾಲ್ಲೂಕಿನ ಮೇಲಾಗಾಣಿ ಗ್ರಾಮದಲ್ಲಿ ‘ಲೋಗ’ನೆಂಬ ನಾಯಿ ಸ್ಮಾರಕಕ್ಕೆ ಸಂಬಂಧಿಸಿದ ಇದುವರೆವಿಗೂ ಬೆಳಕಿಗೆ ಬಾರದ ಶಿಲಾಶಾಸನ   

ಮುಳಬಾಗಿಲು: ಬೆಂಗಳೂರಿನ ಶಾಸನ ಸಂಶೋಧನೆ ಮಾಡುವ ಹವ್ಯಾಸಿ ತಂಡ ಬುಧವಾರ ತಾಲ್ಲೂಕಿನ ಮೇಲಾಗಾಣಿ ಗ್ರಾಮದಲ್ಲಿ ಅಪರೂಪದ ‘ಲೋಗ’ನೆಂಬ ನಾಯಿ ಸ್ಮಾರಕಕ್ಕೆ ಸಂಬಂಧಿಸಿದ ಇದುವರೆವಿಗೂ ಬೆಳಕಿಗೆ ಬಾರದ ಶಿಲಾಶಾಸನವನ್ನು ಗುರುತಿಸಿದ್ದಾರೆ.

ಬೆಂಗಳೂರು ನಗರದ ಧನಪಾಲ್ ಮತ್ತು ಪ್ರೊ.ಕೆ.ಆರ್. ನರಸಿಂಹನ್ ಶಿಲಾಶಾಸನ ಕುರಿತು ಮಾತನಾಡಿ, ರಾಜ್ಯದಲ್ಲಿ ಸಿಕ್ಕಿರುವ ನಾಲ್ಕು ಅಪರೂಪದ ಶಾಸನಗಳಲ್ಲಿ ಇದು ಒಂದಾಗಿದೆ ಎಂದು ತಿಳಿಸಿದರು.

‘ಲೋಗ’ನೆಂಬ ನಾಯಿ ಎಪ್ಪತೈದು ಹಂದಿಗಳನ್ನು, ಮತ್ತೊಂದು ಪಿರಿಸಂದಿಯ ಮಗ ‘ಧಳಗ’ನೆಂಬ ನಾಯಿ ಇಪ್ಪತ್ತಾರು ಹಂದಿಗಳನ್ನೂ ಕೊಂದ ಕಾರಣ ಇಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಇಲ್ಲಿಯೇ ಮತ್ತೊಂದು ಅಪೂರ್ವವಾದ ಸುಂದರ ಲಿಪಿಯ ಬರಹಗಳಿಂದ ಕೂಡಿದ ಶ್ರೀಪುರುಷನ ಮಗನಾಗಿದ್ದ ದುಗ್ಗಮಾರ ಎಲೆಯಪ್ಪನ ಶಾಸನವೂ ಸಿಕ್ಕಿದೆ. ಇದರೊಂದಿಗೆ ತುಂಡಾದ ಭರ್ಜರಿ ವೀರಗಲ್ಲೊಂದು ಪತ್ತೆಯಾಗಿದೆ’ ಎಂದು ವಿವರಿಸಿದರು.

ADVERTISEMENT

ಮೇಲಾಗಾಣಿ ಉಪನ್ಯಾಸಕರಾದ ರತ್ನಪ್ಪ, ಸಾಗರ್, ಭಜರಂಗದಳದ ಚಲಪತಿ, ಪ್ರವೀಣ ಭಾಗವಹಿಸಿದ್ದರು.

ಗ್ರಾಮದಲ್ಲಿ ಸಿಕ್ಕಿರುವ ಅಪರೂಪದ ಶಾಸನಗಳನ್ನು ಸಂರಕ್ಷಿಸುವುದಾಗಿ ಕೆಪಿಸಿಸಿ ಮುಖಂಡ ಎ.ಸಿ. ಸುಭಾಷ್‌ ಚಂದ್ರ ಗೌಡ ತಂಡಕ್ಕೆ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.