ಕೋಲಾರ: ‘ಸಿದ್ದರಾಮಯ್ಯ ಅವರನ್ನು ಬೇಟೆಯಾಡಲು ಪಕ್ಕದಲ್ಲೇ ಸೀಳುನಾಯಿಗಳು ಹೊಂಚು ಹಾಕಿ ಕಾಯುತ್ತಿವೆ. ಬರೀ ಸೀಳುನಾಯಿಗಳಲ್ಲ; ಅವರ ಸುತ್ತ ತಿಮಿಂಗಿಲ, ಹಾವು, ಮೊಸಳೆ, ಚೇಳು ಸುತ್ತುತ್ತಿವೆ. ಯಾವಾಗ ಸಿದ್ದರಾಮಯ್ಯ ಅವರಿಗೆ ಏನು ಮಾಡುತ್ತವೆಯೋ ಗೊತ್ತಿಲ್ಲ’ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮನ್ನು ಸೀಳುನಾಯಿ ಎನ್ನುತ್ತೀರಾ? ತುಸು ಎಚ್ಚರ ತಪ್ಪಿದರೆ ನಿಮ್ಮ ಸುತ್ತ ಇರುವ ಸೀಳುನಾಯಿಗಳು ನಿಮ್ಮನ್ನು ತಿಂದುಬಿಡುತ್ತವೆ. ಈ ಬಗ್ಗೆ ನೀವು ಎಚ್ಚರಿಕೆಯಿಂದ ಇರಬೇಕೇ ಹೊರತು ನಮ್ಮ ವಿರುದ್ಧ ಮಾತನಾಡಿ ಪ್ರಯೋಜನವಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.