ADVERTISEMENT

ಮಕ್ಕಳ ನಡುವೆ ಹೋಲಿಕೆ ಬೇಡ

ಕನಕ ನೌಕರರ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:56 IST
Last Updated 27 ಸೆಪ್ಟೆಂಬರ್ 2021, 5:56 IST
ಮುಳಬಾಗಿಲು ನಗರದ ಡಿವಿಜಿ ಕನ್ನಡ ಗಡಿ ಭವನದಲ್ಲಿ ಕನಕ ನೌಕರರ ಸಂಘದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಿಬಿಎಂಪಿ ಅಧಿಕಾರಿ ಲಲಿತಾ ಕನ್ಯಾಗಪ್ಪ ಉದ್ಘಾಟಿಸಿದರು. ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಶಪ್ಪ, ಕೆ.ಎಂ. ಮರಿಯಪ್ಪ, ಬಿ.ಎಂ. ಶಂಕರಪ್ಪ, ಎನ್. ಲೋಕೇಶ್, ವೆಂಕಟರಾಮಯ್ಯ, ರಂಗಪ್ಪ, ಪಿ.ಎಂ. ನಾರಾಯಣಸ್ವಾಮಿ, ಸೋಮಶೇಖರ, ಅಂಜಿತ್ ಕುಮಾರ್ ಇದ್ದರು
ಮುಳಬಾಗಿಲು ನಗರದ ಡಿವಿಜಿ ಕನ್ನಡ ಗಡಿ ಭವನದಲ್ಲಿ ಕನಕ ನೌಕರರ ಸಂಘದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಿಬಿಎಂಪಿ ಅಧಿಕಾರಿ ಲಲಿತಾ ಕನ್ಯಾಗಪ್ಪ ಉದ್ಘಾಟಿಸಿದರು. ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಶಪ್ಪ, ಕೆ.ಎಂ. ಮರಿಯಪ್ಪ, ಬಿ.ಎಂ. ಶಂಕರಪ್ಪ, ಎನ್. ಲೋಕೇಶ್, ವೆಂಕಟರಾಮಯ್ಯ, ರಂಗಪ್ಪ, ಪಿ.ಎಂ. ನಾರಾಯಣಸ್ವಾಮಿ, ಸೋಮಶೇಖರ, ಅಂಜಿತ್ ಕುಮಾರ್ ಇದ್ದರು   

ಮುಳಬಾಗಿಲು: ‘ಶಿಕ್ಷಣ ಪ್ರತಿಯೊಬ್ಬರಲ್ಲಿ ನೀತಿ ಮತ್ತು ಆಚಾರ ಕಲಿಸುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ಕಾಪಾಡಲು ಸಾಧ್ಯ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿ ಲಲಿತಾ ಕನ್ಯಾಗಪ್ಪ ಹೇಳಿದರು.

ನಗರದ ಡಿವಿಜಿ ಕನ್ನಡ ಗಡಿ ಭವನದಲ್ಲಿ ಕನಕ ನೌಕರರ ಸಂಘದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡುವುದರಿಂದ ಮತ್ತಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬಹುದು ಎಂದು ತಿಳಿಸಿದರು

ADVERTISEMENT

ಪೋಷಕರು ತಮ್ಮ ಮಕ್ಕಳನ್ನು ಇತರೆ ಮಕ್ಕಳಿಗೆ ಹೋಲಿಕೆ ಮಾಡುವುದನ್ನು ಕೈಬಿಡಬೇಕು.‌ ಮತ್ತೊಂದು ಮಗುವಿಗೆ ಹೋಲಿಸಿದಾಗ ನಮ್ಮ ಮಕ್ಕಳಲ್ಲಿ ಕೀಳರಿಮೆ ಭಾವನೆ ಉಂಟಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ ಎಂದು ಸಲಹೆ ನೀಡಿದರು.

ಕನಕ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಶಪ್ಪ ಮಾತನಾಡಿ, ಪ್ರತಿವರ್ಷ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ಬಾರಿ 180 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯ ಚನ್ನಾಪುರ ವೆಂಕಟೇಶ್ ಗೌಡ ಮಾತನಾಡಿ, ಹಿಂದೆ ಮಕ್ಕಳಿಗೆ ವಿದ್ಯಾಭ್ಯಾಸ ಪಡೆದುಕೊಳ್ಳಲು ಬಡತನ ಕಾರಣವಾಗಿತ್ತು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಮನವಿ ಮಾಡಿದರು.

ನಿವೃತ್ತ ಶಿಕ್ಷಕರಾದ ಗಾಯತ್ರಿ, ಶ್ರೀರಾಮಪ್ಪ, ಕ್ರೀಡಾಪಟುಗಳಾದ ಸೋಮಶೇಖರ, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ಕನಕ ನೌಕರರ ಸಂಘದ ಗೌರವಾಧ್ಯಕ್ಷ ಕೆ.ಎಂ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಶಂಕರಪ್ಪ, ಖಜಾಂಚಿ ಎನ್. ಲೋಕೇಶ್, ಪ್ರಧಾನ ಸಲಹೆಗಾರರಾದ ವೆಂಕಟರಾಮಯ್ಯ, ರಂಗಪ್ಪ, ಉಪಾಧ್ಯಕ್ಷ ಪಿ.ಎಂ. ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಸೋಮಶೇಖರ, ಅಂಜಿತ್ ಕುಮಾರ್, ಸಹ ಕಾರ್ಯದರ್ಶಿ ಅಯ್ಯಪ್ಪ, ವಿ. ನಾಗರಾಜ್, ಉಪನ್ಯಾಸಕರಾದ ಆದಿನಾರಾಯಣ, ಶಂಕರ್, ಕೆ.ಎನ್. ತಾಯಲೂರಪ್ಪ, ಕೆ.ಎನ್. ಗೋವಿಂದೇಗೌಡ, ತೊಂಡಹಳ್ಳಿ ಸುಬ್ರಮಣಿ, ವಸಪ್ಪ, ಬಲ್ಲ ಮಂಜುನಾಥ್, ಶಿವಾನಂದ, ನಲ್ಲಾಂಡಹಳ್ಳಿ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.