ADVERTISEMENT

ಕೆಜಿಎಫ್‌: ದುರಸ್ತಿ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:21 IST
Last Updated 10 ಸೆಪ್ಟೆಂಬರ್ 2021, 5:21 IST
ಕೆಜಿಎಫ್‌ ಸಮೀಪದ ಬೇತಮಂಗಲ ಹೊರವಲಯದಲ್ಲಿ 100 ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು
ಕೆಜಿಎಫ್‌ ಸಮೀಪದ ಬೇತಮಂಗಲ ಹೊರವಲಯದಲ್ಲಿ 100 ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು   

ಕೆಜಿಎಫ್‌: ಬೇತಮಂಗಲ–ವಿ. ಕೋಟೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಂಪೂರ್ಣವಾಗಿ ಪೂರೈಸಲು ಗುತ್ತಿಗೆದಾರರು ಬಿಲ್‌ ಪಾವತಿಗಾಗಿ ಪಟ್ಟು ಹಿಡಿದಿದ್ದಾರೆ. ಸಂಚಾರಕ್ಕೆ ತೊಂದರೆಯಾಗುವ ಕಾರಣದಿಂದಾಗಿ ಸ್ವಂತ ಖರ್ಚಿನಿಂದ ಕಾಮಗಾರಿ ಶುರು ಮಾಡಿರುವುದಾಗಿ ಶಾಸಕಿ ಎಂ. ರೂಪಕಲಾ ತಿಳಿಸಿದ್ದಾರೆ.

ಬೇತಮಂಗಲ ಹೊರವಲಯದಲ್ಲಿ ಸುಮಾರು ನೂರು ಮೀಟರ್‌ಗಳಷ್ಟು ದಾರಿಯಲ್ಲಿ ಡಾಂಬರನ್ನು ಗುತ್ತಿಗೆದಾರರು ಅಗೆದಿದ್ದಾರೆ. ಅದನ್ನು ದುರಸ್ತಿ ಮಾಡಿಲ್ಲ. ರಸ್ತೆ ನಿರ್ಮಾಣ ಮಾಡಿಲ್ಲ. 32 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ಒಟ್ಟು ₹ 46 ಕೋಟಿ ವೆಚ್ಚವಾಗಲಿದೆ ಎಂದುತಿಳಿಸಿದ್ದಾರೆ.

ಕಾಮಗಾರಿಗೆ 2017ರ ಡಿಸೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಕಾಮಗಾರಿಯನ್ನು 2018ರ ನವೆಂಬರ್‌ನಲ್ಲಿ ಮುಗಿಸಬೇಕಾಗಿತ್ತು. ಗುಜರಾತ್ ಮೂಲದವರು ರಸ್ತೆ ಅಭಿವೃದ್ಧಿ ಟೆಂಡರ್ ತೆಗೆದುಕೊಂಡಿದ್ದರು. ಗುತ್ತಿಗೆದಾರರು ₹ 18 ಕೋಟಿಯಷ್ಟು ಕಾಮಗಾರಿ ನಡೆಸಿದ್ದರೂ, ಸರ್ಕಾರ ಕೇವಲ ₹ 6 ಕೋಟಿ ಪಾವತಿ ಮಾಡಿದೆ. ಬಾಕಿ ಇರುವ ಹಣವನ್ನು ಕೂಡಲೇ ಮಂಜೂರು ಮಾಡಿ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಚಿವರನ್ನು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ಹಣ ನೀಡದೆ ಕಾಮಗಾರಿ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ ಎಂದು ವಿವರಿಸಿದ್ದಾರೆ.

ADVERTISEMENT

ಜೊತೆಗೆ ರಸ್ತೆ ಅಭಿವೃದ್ಧಿಗೆ ರಸ್ತೆ ಬದಿಯ ಮರಗಳನ್ನು ಕಡಿಯಬೇಕಾಗಿತ್ತು. ಅದಕ್ಕಾಗಿ ಅರಣ್ಯ ಇಲಾಖೆಗೆ ಠೇವಣಿ ಹಣ ನೀಡಬೇಕಾಗಿತ್ತು. ಈ ಸಂಬಂಧವಾಗಿ ಕೂಡ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಕಾಲಾವಕಾಶ ಕೋರಲಾಗಿತ್ತು ಎಂದು ಶಾಸಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.