ಕೋಲಾರ: 2020–21ನೇ ಸಾಲಿನ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಆದ್ಯತಾ ಪಟ್ಟಿಯಲ್ಲಿನ ಕ್ರಮಸಂಖ್ಯೆ 1ರಿಂದ ಆದ್ಯತಾ ಪಟ್ಟಿಯ ಅಂತ್ಯದವರೆಗೂ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ಇಲ್ಲಿ ಗುರುವಾರ ಸುಸೂತ್ರವಾಗಿ ನಡೆಯಿತು.
ಜತೆಗೆ ದೈಹಿಕ ಶಿಕ್ಷಣ ಶಿಕ್ಷಕರ ಪಟ್ಟಿಯಲ್ಲಿನ ಕ್ರಮಸಂಖ್ಯೆ 1ರಿಂದ ಆದ್ಯತಾ ಪಟ್ಟಿಯಲ್ಲಿನ ಅಂತ್ಯದವರೆಗೂ, ವಿಶೇಷ ಶಿಕ್ಷಕರ ಪಟ್ಟಿಯಲ್ಲಿನ ಕ್ರಮಸಂಖ್ಯೆ 1ರಿಂದ ಆದ್ಯತಾ ಪಟ್ಟಿಯಲ್ಲಿನ ಅಂತ್ಯದವರೆಗೂ ಹೆಸರಿರುವ ಶಿಕ್ಷಕರ ಕೌನ್ಸೆಲಿಂಗ್ ಸಹ ನಡೆಯಿತು. ಸ್ಥಳ ಆಯ್ಕೆ ಮಾಡಿಕೊಂಡ ಎಲ್ಲಾ ಪ್ರೌಢ ಶಾಲಾ ಶಿಕ್ಷಕರಿಗೆ ಡಿಡಿಪಿಐ ರೇವಣಸಿದ್ದಪ್ಪ ಸ್ಥಳದಲ್ಲೇ ಆದೇಶಪತ್ರ ನೀಡಿದರು.
‘ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ನಲ್ಲಿ ನಡೆದಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ನೀಡಿಲ್ಲ. ಕೌನ್ಸೆಲಿಂಗ್ನಲ್ಲಿ ಪಾರದರ್ಶಕತೆ ಕಾಪಾಡಿರುವುದರಿಂದ ಯಾವೊಬ್ಬ ಶಿಕ್ಷಕರು ತೊಂದರೆಯಾಗಿರುವ ಬಗ್ಗೆ ಆರೋಪ ಮಾಡಲು ಅವಕಾಶ ನೀಡಿಲ್ಲ’ ಎಂದು ರೇವಣಸಿದ್ದಪ್ಪ ತಿಳಿಸಿದರು.
2 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವರ್ಗಾವಣೆ ಪ್ರಕ್ರಿಯೆ ಇದೀಗ ನಡೆದಿದ್ದು, ಕೌನ್ಸೆಲಿಂಗ್ನಲ್ಲಿ ಶಿಕ್ಷಕರು ಅತಿ ಉತ್ಸಾಹದಿಂದ ಪಾಲ್ಗೊಂಡರು. ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ಡಿವೈಪಿಸಿ ಗಂಗರಾಮಯ್ಯ, ಬಿಇಒಗಳಾದ ವೆಂಕಟರಾಮರೆಡ್ಡಿ, ಕೆಂಪಯ್ಯ, ಉಮಾದೇವಿ, ಗಿರಿಜೇಶ್ವರಿದೇವಿ, ಕೃಷ್ಣಮೂರ್ತಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.