ಮುಳಬಾಗಿಲು: ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಕಾಮಾಕ್ಷಿದೇವಿ ಸಮೇತ ವಿರೂಪಾಕ್ಷೇಶ್ವರ ಸ್ವಾಮಿ ರಥ ಸಪ್ತಮಿ ಹಾಗೂ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಸರ್ಕಾರದ ಪರವಾಗಿ ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಮತ್ತು ವೇಗಮೊಡಗು ಶಂಕರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಂಗಳೂರು ಯಶವಂತಪುರ ಗಾಯತ್ರಿ ದೇವಾಲಯದ ಚಿದಂಬರ ದೀಕ್ಷಿತ್ ಸ್ವಾಮೀಜಿ ನೇತೃತ್ವವಹಿಸಿದ್ದರು. ಪರ್ಯಟೋತ್ಸವ, ವಸಂತೋತ್ಸವ, ನಟರಾಜೋತ್ಸವ, ಶಯನೋತ್ಸವ, ದ್ವಾದಶಿ ಮಂಗಳಾರತಿ, ವೃಷಭ ವಾಹನೋತ್ಸವ, ಗ್ರಾಮೋತ್ಸವ ಕಾರ್ಯಕ್ರಮ ನಡೆಯಿತು.
ಉಪ ತಹಶೀಲ್ದಾರ್ ಎಂ.ಎಚ್. ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸಿ. ಸುಬ್ರಮಣಿ, ವಿ.ಎಸ್. ಗಿರೀಶ್, ಆಗಮಿಕರಾದ ವಿ.ಎಸ್. ಕುಮಾರಸ್ವಾಮಿ ದೀಕ್ಷಿತ್, ಬೆಂಗಳೂರಿನ ವಿ.ಪಿ. ಆನಂದ ದೀಕ್ಷಿತ್, ವೆಂಕಟೇಶ್ ಶರ್ಮ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.