ಹನುಮಸಾಗರ: ನಾಲ್ಕಾರು ವರ್ಷಗಳಿಂದ ಈ ಭಾಗದಲ್ಲಿ ಅಂತರ್ಜಲ ಕುಸಿತಗೊಂಡಿದ್ದರಿಂದ ಜನತೆ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಿಸುತ್ತಿದ್ದರು. ಆದರೆ ಮೂರು ದಿನಗಳ ಹಿಂದೆ ಬಿದ್ದ ಭಾರಿ ಮಳೆಗೆ ವೆಂಕಟೇಶ್ವರ ಕೆರೆ ತುಂಬಿದ್ದು, ಗ್ರಾಮದ ಕೊಳವೆ ಬಾವಿಗಳಲ್ಲಿ ನೀರು ತುಂಬಿದೆ.
ಈ ಬೆಟ್ಟದ ಮೂಲೆಯೊಂದರಲ್ಲಿ ಹೆಚ್ಚು ಮಳೆಯಾದರೆ ಸಹಜವಾಗಿ ಬರುವ ಈ ನೀರಿಗೆ ಸ್ಥಳೀಯರು ಆನೆ ಊಟಿ ಎಂದು ಕರೆಯುತ್ತಾರೆ. ಎಂಟು ವರ್ಷಗಳ ಅವಧಿಯಲ್ಲಿ ಇದೆ ಪ್ರಥಮ ಬಾರಿಗೆ ಈ ನೀರಿನ ಸೆಲೆ ಬಂದಿದೆ.
ಆದರೆ ಈ ಸೆಲೆ ನೀರು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬರಬೇಕಾದರೆ ಹೆಚ್ಚಿನ ಮಳೆ ಅವಶ್ಯವಾಗಿದೆ, ಹೆಚ್ಚು ಮಳೆಯಾದರೆ ಈ ನೀರು ಆನೆಯ ಸೊಂಡಿಲು ತರಹ ಬೀಳುವುದರಿಂದ ಜನರು ಆನೆ ಊಟಿ(ಸೆಲೆ) ಎಂದು ಹೇಳುತ್ತಾರೆ.
ಒಂದು ಬಾರಿ ಈ ರೀತಿ ಊಟಿ ಕಿತ್ತಿ ಬಂದರೆ ನಮ್ಮ ಭಾಗದ ಕರೆ ತುಂಬಿಕೊಂಡು ಅಂತರ್ಜಲ ಭರ್ತಿಯಾಗುತ್ತವೆ ಎಂದು ಸುರೇಶಬಾಬು ಜಮಖಂಡಿಕರ ಹೇಳುತ್ತಾರೆ.
ನೀರಿಗಾಗಿ ತತ್ತರಿಸಿ ಹೋಗಿದ್ದ ಇಲ್ಲಿನ ಜನರು ಸೊಗಸಾಗಿ ಹಳ್ಳದ ರೀತಿಯಲ್ಲಿ ಹರಿದು ಬರುತ್ತಿದ್ದ ನೀರು ಸಂತಸ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.