ADVERTISEMENT

ಮಾರ್ಚ್ 31ರ ವರೆಗೂ ಕಾಲುವೆಗೆ ನೀರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST
ಮಾರ್ಚ್ 31ರ ವರೆಗೂ ಕಾಲುವೆಗೆ ನೀರು
ಮಾರ್ಚ್ 31ರ ವರೆಗೂ ಕಾಲುವೆಗೆ ನೀರು   

ಗಂಗಾವತಿ: ಎಡದಂಡೆ ಮುಖ್ಯನಾಲೆಯ 17ನೇ ವಿತರಣಾ ಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ದಾಸನಾಳದಲ್ಲಿ ಮಂಗಳವಾರ ರೈತರು ಧರಣಿ ನಡೆಸಿದರು. ರೈತರ ಹೋರಾಟಕ್ಕೆ ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ್ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ರೈತರು ಹಮ್ಮಿಕೊಂಡ ಧರಣಿ ಸ್ಥಳಕ್ಕೆ ವಡ್ಡರಹಟ್ಟಿ ವಿಭಾಗದ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ ಅವರೊಂದಿಗೆ ಆಗಮಿಸಿದ ಶಾಸಕ ಪರಣ್ಣ ಮುನವಳ್ಳಿ ರೈತರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಶಾಸಕ, 31ರವರೆಗೂ ನೀರು ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.

ರೈತರ ಪರವಾಗಿ ಉದ್ಯಮಿ ಕಲ್ಯಾಣಂ ನಾಗೇಶ್ವರರಾವ್ ಮಾತನಾಡಿದರು. ಜ.1ರಿಂದ ಮುಖ್ಯ ಕಾಲುವೆಗೆ 3 ಸಾವಿರ ಕ್ಯೂಸೆಕ್ ನೀರು ಮಾತ್ರ ಹರಿಸಲಾಗುತ್ತಿದೆ. 17ನೇ ವಿತರಣಾ ಕಾಲುವೆಗೆ 40ರಿಂದ 45 ಕ್ಯೂಸೆಕ್ ನೀರು ಹರಿಸಲು ಸಾಧ್ಯ ಎಂದು ಇ.ಇ ವೆಂಕಟೇಶ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.