ಕೊಪ್ಪಳ: ಇಲ್ಲಿನ ಕುಷ್ಟಗಿ ರಸ್ತೆಯ ಭಾಗ್ಯನಗರ ಕ್ರಾಸ್ ಸಮೀಪ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶರಣಪ್ಪ ಲೇಬಗೇರಿ (45) ಮೃತಪಟ್ಟಿದ್ದಾರೆ.
ಮೆಕ್ಕೆಜೋಳ ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಂಕ್ಚರ್ ಆಗಿದ್ದರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಸುತ್ತಲೂ ಕತ್ತಲಿದ್ದ ಕಾರಣ ಟ್ರ್ಯಾಕ್ಟರ್ ಕಾಣಿಸದೆ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದ ಶರಣಪ್ಪ ಹಾಗೂ ಜೊತೆಗಾರ ಹಿಂಭಾಗದಿಂದ ಗುದ್ದಿದ್ದಾರೆ ಎನ್ನಲಾಗಿದೆ. ತಲೆಗೆ ಜೋರು ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶರಣಪ್ಪ ಅವರ ಜೊತೆಗೆ ಮೃತಪಟ್ಟಿರುವ ಇಬ್ಬೊಬ್ಬರು ಮೂಲತಃ ಬಾದಾಮಿ ಹತ್ತಿರದ ಜಾಲಿಹಾಳದವರು ಎಂದು ಗೊತ್ತಾಗಿದೆ. ಕೆಲ ವರ್ಷಗಳಿಂದ ಕೊಪ್ಪಳ ತಾಲ್ಲೂಕಿನ ಲೇಬಗೇರಿಯಲ್ಲಿ ನೆಲೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.