ADVERTISEMENT

ಕೊಪ್ಪಳ | ಎಪಿಎಂಸಿ ಚುನಾವಣೆ: ಅವಿರೋಧವಾಗಿ ಆಯ್ಕೆ

ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:17 IST
Last Updated 4 ಜೂನ್ 2020, 16:17 IST
ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 4ನೇ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಗರಾಜ ಚಳ್ಳೊಳ್ಳಿ ಹಾಗೂ ವೆಂಕಣ್ಣ ವರಕನಹಳ್ಳಿ ಅವರನ್ನು ಮುಖಂಡರು, ಬೆಂಬಲಿಗರು ಅಭಿನಂದಿಸಿದರು 
ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 4ನೇ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಗರಾಜ ಚಳ್ಳೊಳ್ಳಿ ಹಾಗೂ ವೆಂಕಣ್ಣ ವರಕನಹಳ್ಳಿ ಅವರನ್ನು ಮುಖಂಡರು, ಬೆಂಬಲಿಗರು ಅಭಿನಂದಿಸಿದರು    

ಕೊಪ್ಪಳ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 4ನೇ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ನಾಗರಾಜ ಚಳ್ಳೊಳ್ಳಿ ಹಾಗೂ ಉಪಾಧ್ಯಕ್ಷರಾಗಿ ವೆಂಕಣ್ಣ ವರಕನಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್‌, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಕೆ.ರಾಜಶೇಖರ ಹಿಟ್ನಾಳ, ಸದಸ್ಯ ಗೂಳಪ್ಪ ಹಲಗೇರಿ ಚುನಾಯಿತರನ್ನು ಅಭಿನಂದಿಸಿದರು. ಬಳಿಕ ಬೆಂಬಲಿಗರು ಎ.ಪಿ.ಎಂ.ಸಿ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಸಿದ್ದಯ್ಯಸ್ವಾಮಿ ಹಿರೇಮಠ, ಅಜೀಮ್‌ ಅತ್ತಾರ, ಮೆಹಬೂಬ್‌ ಅರಗಂಜಿ, ಅಕ್ಬರ್‌ಪಾಷಾ ಪಲ್ಟನ್‌, ಮುಖಂಡರಾದ ಹನುಮಂತಗೌಡ್ರು ಪೋಲಿಸ್ ಪಾಟೀಲ, ವೆಂಕನಗೌಡ ಹಿರೇಗೌಡ್ರು, ಭರಮಪ್ಪ ನಗರ, ಪ್ರಸನ್ನ ಗಡಾದ, ವಿರುಪಣ್ಣ ನವೋದಯ, ಶಿವಕುಮಾರ ಪಾವಲಿಶೆಟ್ಟರ, ಅಡಿವೆಪ್ಪ ರಾಟಿ ಉಪಸ್ಥಿತರಿದ್ದರು.

ADVERTISEMENT

ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಜಿ.ಬಿ.ಮಜ್ಜಿಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.