ADVERTISEMENT

ಕೊಪ್ಪಳ: ಪರಸ್ಪರ ದ್ವಿಚಕ್ರ ವಾಹನಗಳ ಡಿಕ್ಕಿ ಇಬ್ಬರು ಸವಾರರು ಸಾವು

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 6:57 IST
Last Updated 8 ಜೂನ್ 2020, 6:57 IST
ಅಪಘಾತ–ಸಾಂಕೇತಿಕ ಚಿತ್ರ
ಅಪಘಾತ–ಸಾಂಕೇತಿಕ ಚಿತ್ರ   

ಕನಕಗಿರಿ (ಕೊಪ್ಪಳ ಜಿಲ್ಲೆ): ದ್ವಿಚಕ್ರ ವಾಹನಗಳ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸವಾರರು ಸ್ಥಳಗಳಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಚಿಕ್ಕ ಮಾದಿನಾಳ ಗ್ರಾಮದ ಕ್ರಾಸ್‌ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಸಿಂಧನೂರು ತಾಲ್ಲೂಕಿನ ಬಂಗಾಲಿ ಕ್ಯಾಂಪ್ ನಿವಾಸಿ ಭೋಲಾಕ್ ಅಬಿಡು(35), ಹಾಗೂ ತಾಲ್ಲೂಕಿನ ಇಂಗಳದಾಳ ತಾಂಡದ ದ್ಯಾಮಣ್ಣ ಮೇಣೆದಾಳ (34) ಎಂದು ಗುರುತಿಸಲಾಗಿದೆ.

ಬಂಗಾಲಿ ಕ್ಯಾಪ್‌ನ ವ್ಯಕ್ತಿ ಕೊಪ್ಪಳದ ಕಡೆಗೆ, ಇಂಗಳದಾಳ ತಾಂಡದ ವ್ಯಕ್ತಿ ಕನಕಗಿರಿ ಕಡೆಗೆ ಬರುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಬಂಗಾಲಿ ಕ್ಯಾಂಪ್ ಹಿಂಬದಿ ಸವಾರ ನಿಶ್ಚಯ ಗಾಯಗೊಂಡಿದ್ದು, ಇಲ್ಲಿನ‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.