ಗಂಗಾವತಿ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಶ್ರೀರಾಮನಗರ, ಜಂಗಮರ ಕಲ್ಗುಡಿ, ಹಣವಾಳ ಗ್ರಾಮ ವ್ಯಾಪ್ತಿಯಲ್ಲಿನ ಭತ್ತದ ಸಸಿ ಮಡಿಗಳು ಹಾಳಾಗಿವೆ.
ರಾತ್ರಿ 9 ಗಂಟೆಯಿಂದ ಶುರುವಾದ ಮಳೆ ತಡರಾತ್ರಿವರೆಗೆ ಸುರಿದಿದೆ. ಅದರ ಪರಿಣಾಮ ಗಂಗಾವತಿ ನಗರದಲ್ಲಿನ ಚರಂಡಿಗಳು ತುಂಬಿ ಹರಿದಿವೆ. ಹದಗೆಟ್ಟ ರಸ್ತೆಗಳಲ್ಲಿನ ತೆಗ್ಗು-ಗುಂಡಿಗಳಲ್ಲಿ ನೀರು ಸಂಗ್ರಹಗೊಂಡಿದೆ. ಹೊಲಗದ್ದೆಗಳಲ್ಲಿ ನೀರು ಸಂಗ್ರಹಗೊಂಡಿದ್ದು, ತಡವಾಗಿ ಭತ್ತ ಕಟಾವು ಮಾಡಿ, ಬಣಿವೆ ಹಾಕಿಕೊಳ್ಳಲು ಭತ್ತದ ಜಮೀನಿನಲ್ಲಿ ರಾಶಿ ರೂಪದಲ್ಲಿ ಸಂಗ್ರಹಿಸಿದ್ದ, ಹಲ್ಲು ಸಂಪೂರ್ಣವಾಗಿ ನೀರಿನಲ್ಲಿಯೇ ಉಳಿದಿದ್ದು, ಬಳಕೆಗೆ ಬಾರದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.