ADVERTISEMENT

ಪ್ರವಾಸಿಗರ ಮೇಲೆ ಹಲ್ಲೆ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 16:00 IST
Last Updated 3 ಜನವರಿ 2024, 16:00 IST

ಗಂಗಾವತಿ: ತಾಲ್ಲೂಕಿನ ಬಸವನದುರ್ಗಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ಉತ್ತರಪ್ರದೇಶ ಪ್ರವಾಸಿಗರ ಬಸ್ ಕೇಬಲ್‌ಗೆ ಬಡಿದು ತುಂಡಾಗಿ, ಪ್ರವಾಸಿಗರ ವಿರುದ್ಧ ಬಸವನದುರ್ಗಾ ಗ್ರಾಮಸ್ಥರು ಮಾಡಿದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.

ಉತ್ತರಪ್ರದೇಶ ಪ್ರವಾಸಿ ಪ್ರಾರ್ಥ ರಾಮಜೀ ತಿವಾರಿ ಠಾಣೆಗೆ ಫಿರ್ಯಾಧಿ ನೀಡಿ, ಉತ್ತರಪ್ರದೇಶದಿಂದ 5 ಬಸ್ಸುಗಳಲ್ಲಿ ಕರ್ನಾಟಕಕ್ಕೆ ತೀರ್ಥ ಪ್ರವಾಸ ಬಂದು, ಮಂಗಳವಾರ ಅಂಜನಾದ್ರಿ ಆಂಜನೇಯನ ದರ್ಶನ ಪಡೆದು ಮಹಾರಾಷ್ಟ್ರಕ್ಕೆ ತೆರಳಲು ಆನೆಗೊಂದಿ ಮಾರ್ಗವಾಗಿ ಬರುವಾಗ ಬಸವನ ದುರ್ಗಾ ಗ್ರಾಮದಲ್ಲಿ ಬಸ್ಸಿಗೆ ಕೇಬಲ್ ಬಡಿದು ತುಂಡಾಗಿದೆ. ಈ ವೇಳೆ ಸ್ಥಳೀಯರು ಕಬ್ಬಿಣದ ರಾಡಿನಿಂದ ಬಸ್ಸಿಗೆ ಹೊಡೆದು, ಹಣಕ್ಕೆ ಬೇಡಿಕೆಯಿಟ್ಟು, ಪ್ರವಾಸಿಗರ ವಿರುದ್ದ ಹಲ್ಲೆ ನಡೆಸಿದ್ದಾರೆ ಎಂದು ರಾಮಜೀ ತಿವಾರಿ ಸ್ಥಳೀಯ ನಾಗರಾಜ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಗರಾಜನನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT