ADVERTISEMENT

ಟಿಕೆಟ್‌ ಸಿಗದವರಿಗೆ ಸೂಕ್ತ ಸ್ಥಾನಮಾನ

ಕೊಪ್ಪಳದಲ್ಲಿ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 12:44 IST
Last Updated 18 ಜೂನ್ 2020, 12:44 IST
ಜಗದೀಶ್‌ ಶೆಟ್ಟರ್
ಜಗದೀಶ್‌ ಶೆಟ್ಟರ್   

ಕೊಪ್ಪಳ: ‘ಪಕ್ಷದ ಹೈಕಮಾಂಡ್‌ ನಿರ್ಧಾರವನ್ನು ಎಲ್ಲರೂ ಒಪ್ಪಬೇಕು. ಯಾರಿಗೆ ಟಿಕೆಟ್‌ ಸಿಕ್ಕಿಲ್ಲ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಕೆಲಸವನ್ನು ಬಿಜೆಪಿ ಮಾಡುತ್ತದೆ‘ ಎಂದುಸಚಿವ ಜಗದೀಶ್‌ ಶೆಟ್ಟರ್ ಹೇಳಿದರು.

ಕೊಪ್ಪಳದ ಬಸಾಪುರ ಬಳಿ ಅಭಿವೃದ್ಧಿಪಡಿಸಲಾಗಿರುವ ಕೈಗಾರಿಕಾ ವಸಾಹತವನ್ನು ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿರು.

‘ಈಗ ಟಿಕೆಟ್‌ ನೀಡಲು ಅವಕಾಶ ಇತ್ತು. ಆದರೆ ಪಕ್ಷದ ನಿರ್ಧಾರವನ್ನು ಗೌರವಿಸಬೇಕು. ತಮ್ಮ ಸ್ಥಾನವನ್ನು ತ್ಯಾಗ ಮಾಡಿ, ಸರ್ಕಾರ ರಚನೆಗೆ ಸಹಕಾರ ನೀಡಿದವರಿಗೆ ಯಾವಾಗಲು ಗೌರವ ಕೊಡುತ್ತೇವೆ. ಕೋರ್‌ ಕಮೀಟಿ ಸಭೆಯಲ್ಲಿ ವಿಶ್ವನಾಥ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆಯಾಗಿದೆ. ಅದನ್ನೆಲ್ಲ ಹೊರಗೆ ಹೇಳಲಾಗುವುದಿಲ್ಲ.ಟಿಕೆಟ್‌ ಹಂಚಿಕೆಯಲ್ಲಿ ಷಡ್ಯಂತ್ರ ನಡೆಸಲಾಗಿದೆ ಎಂಬ ವಿಶ್ವನಾಥ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು.

ADVERTISEMENT

ಜಿಂದಾಲ್‌ನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಕುರಿತು ಮಾತನಾಡಿ, ಒಳಗಿರುವವರನ್ನು ಅಲ್ಲಿಯೇ ಕ್ವಾರಂಟೈನ್‌ ಮಾಡಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲಿನ ಕೈಗಾರಿಕೆಗಳಲ್ಲಿ ಭಾಗವಹಿಸುವವರನ್ನು ಅಲ್ಲಿಯೇ ದಿಗ್ಭಂಧಿಸಲು ನಿರ್ಧರಿಸಲಾಗಿದೆ. ಮುಂದುವರಿಸಲೇಬೇಕಾದ ಕೈಗಾರಿಕೆಗಳನ್ನು ಧಿಢೀರನೇ ಬಂದ್‌ ಮಾಡಲಾಗುವುದಿಲ್ಲ. ನಿಯಮಗಳನ್ನು ಪರಿಶೀಲಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದರು.

ಪ್ರಧಾನಿ ಮೋದಿ ಅವರು ದೇಶದ ಹಿತದೃಷ್ಟಿಯಿಂದ ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಯುದ್ದ ಮಾಡಬೇಕೋ, ಬೇಡವೋ ಎಂಬುದರ ಕುರಿತು ತಕ್ಕದಾದ ಉತ್ತರ ಕೊಡುವ ಬಗ್ಗೆ ಅವರೇ ಹೇಳಿದ್ದಾರೆ. ಚೀನಾ ಮೋಸದ ಕೃತ್ಯ ಎಸಗುತ್ತಿರುವುದು ಜನಮಾನಸದಲ್ಲಿ ಬಂದಿದೆ. ಈ ಹಿನ್ನೆಲೆಯಲ್ಲಿ ಚೀನಾ ನಿರ್ಮಿತ ವಸ್ತುಗಳನ್ನು ಉಪಯೊಗ ಮಾಡಬಾರದು ಎಂಬ ಜಾಗೃತಿ ಜನರಲ್ಲಿ ಮೂಡುತ್ತಿದೆ. ಇದೊಂದು ಕೈಗೂಡಿದಲ್ಲಿ ಚೀನಾದ ಮೇಲೆ ಭೌಗೋಳಿಕ ಯುದ್ಧ ಮಾಡುವ ಅವಶ್ಯಕತೆ ಇಲ್ಲ. ದೇಶದ 130 ಕೋಟಿ ಜನ ಚೀನಾ ವಸ್ತುಗಳನ್ನು ಬಳಸದ ಬಗ್ಗೆ ಪ್ರತಿಜ್ಞೆ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.