ADVERTISEMENT

ಹನುಮ ಜಯಂತಿ: ಕೊರೊನಾ ಮಾರಿ ನಾಶಕ್ಕೆ ಎಲೆ ಪೂಜೆ ಸೇವೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 8:58 IST
Last Updated 9 ಏಪ್ರಿಲ್ 2020, 8:58 IST
ಕೊಪ್ಪಳ ತಾಲ್ಲೂಕಿನ ಅಗಳಕೇರಾ ಗುಡ್ಡದ ಮೇಲೆ ಇರುವ ಅಂದಿಗಾಲೇಶ್ವರಿನಿಗೆ ಹನುಮ ಜಯಂತಿ ಪ್ರಯುಕ್ತ ಎಲೆ ಪೂಜೆ ನೆರೆವೇರಿತು
ಕೊಪ್ಪಳ ತಾಲ್ಲೂಕಿನ ಅಗಳಕೇರಾ ಗುಡ್ಡದ ಮೇಲೆ ಇರುವ ಅಂದಿಗಾಲೇಶ್ವರಿನಿಗೆ ಹನುಮ ಜಯಂತಿ ಪ್ರಯುಕ್ತ ಎಲೆ ಪೂಜೆ ನೆರೆವೇರಿತು   

ಕೊಪ್ಪಳ: ಜಗತ್ತಿನಾದ್ಯಂತ ತನ್ನ ಕಬಂಧಬಾಹು ಚಾಚಿ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಕೊರೊನಾ ಎಂಬ ರೋಗ ಶೀಘ್ರವೇ ಅವನತಿ ಹೊಂದಲಿ, ಇದನ್ನು ಉದ್ದೇಶಪೂರ್ವಕವಾಗಿ ಹಬ್ಬಿಸುವ ಮನಃಸ್ಥಿತಿ ಉಳ್ಳವರಿಗೆ ಭಗವಂತ ಸದ್ಬುದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿತಾಲ್ಲೂಕಿನಅಗಳಕೇರಿ ಬಳಿಯ ಗುಡ್ಡದ ಮೇಲೆ ಇರುವ ಐತಿಹಾಸಿಕ ಅಂದಿಗಾಲೀಶ್ವರ (ಹನುಮ)ನಿಗೆಎಲೆ ಚೆಟ್ಟಿ ಸೇವೆ ಮಾಡಲಾಯಿತು.

ಶಹಾಪುರ ಗಿರೀಶ್ ಹಿರೇಮಠ ಮತ್ತು ವೀರಣ್ಣ ಕೋಮಲಾಪುರ ಕುಂಕುಮಾರ್ಚನೆ ನಡೆಸಿದರು.

ನಗರದ ವಿವಿಧ ಆಂಜನೇಯನ ದೇವಸ್ಥಾನಗಳಲ್ಲಿ ಅರ್ಚಕರು ಮಾತ್ರ ವಿಶೇಷ ಪೂಜೆ, ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ADVERTISEMENT

ಪುರಾಣ ಪ್ರಸಿದ್ಧ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆ ನಡೆಯಿತು. ಮೊದಲ ಬಾರಿಗೆ ಜನರಿಲ್ಲದೆ ಅಂಜನಾದ್ರಿ ಪರ್ವತ ಬಿಕೋ ಎನ್ನುತ್ತಿತ್ತು. ದೇವಸ್ಥಾನದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಅರ್ಚಕರು ಹನುಮಾನ್ ಚಾಲೀಸಾ ಪಠಿಸಿ ಜಯಂತಿಯನ್ನು ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.