ಕೊಪ್ಪಳ: ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷರಾಗಿ ಇಲ್ಲಿನ ವಕೀಲ ಹಾಗೂ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತ ಸದಸ್ಯ ಪೀರಾ ಹುಸೇನ್ ಹೊಸಳ್ಳಿ ನೇಮಕವಾಗಿದ್ದಾರೆ.
ಉಪಾಧ್ಯಕ್ಷರಾಗಿ ಸೈಯದ್ ಮುರ್ತುಜಾ ಅಮೀನುದ್ದಿನ್ ಮುಲ್ಲಾ, ಮೌಲಾನಾ ಸೈಯದ್ ಖಾಜಾಪಾಶಾ, ಎಸ್.ಎ.ಮಾಜೀದ್ ಹಾಗೂ ಖಾಜಿ ಗುಲಾಮ್ ಹುಸೇನ್ ನೂರಿ ನೇಮಕವಾದರು.
ಜಿಲ್ಲಾ ವಕ್ಫ್ ಸಲಹಾ ಮಂಡಳಿಗೆ ಆಡಳಿತ ಮಂಡಳಿ ಸದಸ್ಯರಾಗಿ ಮರ್ದಾನ್ಅಲಿ ಮುಜಾವರ್, ಸೈಯದ್ ನಾಸೀರ್ ಕಂಠಿ, ಹೈದರ್ ಗಂಗಾವತಿ, ಅಮಾನುಲ್ಲಾ ಕನಕಗಿರಿ, ಹುಸೇನ್ಸಾಬ್ ಯಲಬುರ್ಗಾ, ಅಬ್ದುಲ್ ರಶೀದ್ಸಾಬ್, ಖಾಜಾ ಮೈನುದ್ದೀನ್ ಮುಲ್ಲಾ, ಹಾಶಮ್ ತಹಸೀಲ್ದಾರ್, ಅಬ್ದುಲ್ಲಾ ಸಾಹೀಬ್ ಗಂಗಾವತಿ, ಮೆಹಬೂಬಪಾಶಾ, ಮುನಾಫ್ ಮಕಾನದಾರ್, ನಜೀರ್ ಅಹ್ಮದ್ ಬಸವಪುರ, ರಶೀದ್ಸಾಬ್ ಉಮಚಗಿ, ಆಯುಬ್ ಖಾಜಾವಲಿ, ರಶೀದ್ಸಾಬ್ ರಾಜೇಸಾಬ್ ಆಯ್ಕೆಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.