ADVERTISEMENT

ಕುಕನೂರು: ತಾಲ್ಲೂಕು ಅಭಿವೃದ್ಧಿಗೆ ಬದ್ಧ; ಶಾಸಕ ಹಾಲಪ್ಪ ಆಚಾರ್

ತಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 12:44 IST
Last Updated 28 ಆಗಸ್ಟ್ 2020, 12:44 IST
ಕುಕನೂರಿನ ತಾಲ್ಲೂಕು ಪಂಚಾಯಿತಿ ಕಾರ್ಯಲಯದಲ್ಲಿ ಶುಕ್ರವಾರ ಶಾಸಕ ಹಾಲಪ್ಪ ಆಚಾರ್ ಅಂಗವಿಕಲರಿಗೆ ಸೈಕಲ್ ವಿತರಿಸಿದರು   
ಕುಕನೂರಿನ ತಾಲ್ಲೂಕು ಪಂಚಾಯಿತಿ ಕಾರ್ಯಲಯದಲ್ಲಿ ಶುಕ್ರವಾರ ಶಾಸಕ ಹಾಲಪ್ಪ ಆಚಾರ್ ಅಂಗವಿಕಲರಿಗೆ ಸೈಕಲ್ ವಿತರಿಸಿದರು      

ಕುಕನೂರು: ‘ತಾಲ್ಲೂಕು ಅಭಿವೃದ್ಧಿಗೆ ಬದ್ಧ’ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸಲು ಮತ್ತು ಸಮುದಾಯ ಭವನ, ಶಾಲಾ ಕೊಠಡಿ ಹಾಗೂ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚು ಅನುದಾನ ನೀಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ತಾಲ್ಲೂಕು ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುತ್ತೇನೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗನ್ನಾಥಗೌಡ ಪಾಟೀಲ, ಉಪಾಧ್ಯಕ್ಷೆ ದುರಗಮ್ಮ ಗಾಧಿ, ಶಿವಕುಮಾರ ನಾಗಲಾಪುರಮಠ, ಶಂಭು ಜೋಳದ, ಶ್ರೀನಿವಾಸ ತಿಮ್ಮಾಪುರ, ಮಂಜುನಾಥ ಗಟ್ಟೇಪ್ಪನವರ, ಮಾರುತಿ ಗಾವರಾಳ, ಗಂಗಮ್ಮ ಗುಳಗಣ್ಣನವರ, ವಿಶ್ವನಾಥ ಮರಿಬಸಪ್ಪನವರ ಹಾಗೂ ಶರಣಪ್ಪ ಬಣ್ಣಬಭಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.