ADVERTISEMENT

ವರದಿ ಜಾರಿಗೆ ವಿರೋಧ: ಸಚಿವರ ಕಾರಿಗೆ ಮುತ್ತಿಗೆ

ಹೇಳಿಕೆ ಸಮರ್ಥಿಸಿಕೊಂಡ ಪ್ರಭು ಚವಾಣ್‌: ಮಾದಿಗ ಸಮಾಜದ ಮುಖಂಡರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 3:57 IST
Last Updated 2 ಸೆಪ್ಟೆಂಬರ್ 2021, 3:57 IST
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಸಚಿವ ಪ್ರಭು ಚವಾಣ್‌ ಅವರ ಕಾರಿಗೆ ಕೊಪ್ಪಳದಲ್ಲಿ ಬುಧವಾರ ಮುತ್ತಿಗೆ ಹಾಕಲು ಬಂದ ಮಾದಿಗ ಮಹಾಸಭಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಸಚಿವ ಪ್ರಭು ಚವಾಣ್‌ ಅವರ ಕಾರಿಗೆ ಕೊಪ್ಪಳದಲ್ಲಿ ಬುಧವಾರ ಮುತ್ತಿಗೆ ಹಾಕಲು ಬಂದ ಮಾದಿಗ ಮಹಾಸಭಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು   

ಕೊಪ್ಪಳ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧವಿದೆ’ ಎಂದು ಹೇಳಿಕೆ ನೀಡಿದ್ದಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಅವರ ಕಾರಿಗೆ ಮಾದಿಗ ಮಹಾಸಭಾದ ಮುಖಂಡರು ಮುತ್ತಿಗೆ ಹಾಕಲು ಬಂದಿದ್ದರಿಂದ ಅವರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋದರು.

ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಬಂದಾಗ ಮಾದಿಗ ಸಮಾಜದ ಮುಖಂಡರು ಸಚಿವರ ವಿರುದ್ಧ ಘೋಷಣೆ ಕೂಗಿ, ಕಾರಿನತ್ತ ಬಂದರು. ಅವರನ್ನು ಪೊಲೀಸರು ತಡೆದು ಬಂಧಿಸಿ ಮುನಿರಾಬಾದ್‌ಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರು.

ಮಾದಿಗ ಮಹಾಸಭಾದ ಮುಖಂಡ ಮಲ್ಲಿಕಾರ್ಜುನ ಪೂಜಾರ, ‘ಸಚಿವ ಚವಾಣ್‌ ಅವರು ಹೇಳಿಕೆ ಹಿಂದಕ್ಕೆ ಪಡೆದು, ವರದಿ ಜಾರಿಗೆ ಸಹಕರಿಸಬೇಕು. ಇಲ್ಲದಿದ್ದರೆಅವರು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಕಪ್ಪುಬಟ್ಟೆ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸುತ್ತೇವೆ’ ಎಂದುಎಚ್ಚರಿಕೆ ನೀಡಿದರು.

ADVERTISEMENT

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಈ ಮಾತನ್ನು ನಾನು ಹಿಂದಿನಿಂದಲೂ ಹೇಳುತ್ತ ಬಂದಿದ್ದೇನೆ. ಇದು ನನ್ನ ವೈಯಕ್ತಿಕ ಮತ್ತು ಸಮಾಜದ ಅಭಿಪ್ರಾಯ. ವರದಿ ಜಾರಿಗೆ ಬಿಡುವುದಿಲ್ಲ’ ಎಂದರು.

ತಮ್ಮ ಹಿಂಬಾಲಕರಿಂದ ಶೂ ತರಿಸಿ ಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಇದು ದೊಡ್ಡ ವಿಷಯವಲ್ಲ. ಶೂ ತರು ವಂತೆ ಹೇಳಿದ್ದೇನೆಯೇ ಹೊರತು ಕೈಯಲ್ಲಿ ಹಿಡಿದುಕೊಂಡು ಬರುವಂತೆ ಹೇಳಿಲ್ಲ’ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.