ರಾಮನಗರ: ಬಿಡದಿಯ ನಿತ್ಯಾನಂದ ಆಶ್ರಮದ ಬಳಿ ಕುಡಿದು ಗಲಾಟೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಮಧುಲೋಕ ಲಿಕ್ಕರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಲೋಕೇಶ್ ಎಂಬುವರನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದೇ 27ರಂದು ಮುಂಜಾನೆ ಕಾರಿನಲ್ಲಿ ಯುವತಿಯೊಬ್ಬಳ ಜೊತೆ ಬಂದಿದ್ದ ಉದ್ಯಮಿ ನಿತ್ಯಾನಂದ ಆಶ್ರಮದ ಬಳಿ ಕುಡಿದು ಗಲಾಟೆ ಮಾಡಿದ್ದರು. ಆಶ್ರಮದ ಬಳಿ ಇದ್ದ ದೇವರ ವಿಗ್ರಹಕ್ಕೆ ಬಿಯರ್ ಸುರಿದಿದ್ದರು. ನಂತರ ಆಶ್ರಮದ ವ್ಯಕ್ತಿಯೊಬ್ಬರ ಮೇಲೆ ಬಾಟಲ್ ಎಸೆದಿದ್ದರು. ಈ ಕುರಿತು ಅಲ್ಲಿನ ಸಿಬ್ಬಂದಿ ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.