ADVERTISEMENT

ಅಂಗನವಾಡಿ ನೌಕರರ ಸಮ್ಮೇಳನ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 5:15 IST
Last Updated 6 ನವೆಂಬರ್ 2012, 5:15 IST

ಮೈಸೂರು: ಐಸಿಡಿಎಸ್ ಯೋಜನೆ ಬಲಪಡಿಸಿ, ಅಪೌಷ್ಟಿಕತೆ ಹೋಗ ಲಾಡಿಸಿ, ಬದುಕಿನ ಭದ್ರತೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು ನಗರದ ನಂಜರಾಜ್ ಬಹದ್ದೂರ್ ಛತ್ರದಲ್ಲಿ ನಡೆಸಿದ 5ನೇ ರಾಜ್ಯ ಸಮ್ಮೇಳನ ಸೋಮವಾರ ಮುಕ್ತಾಯಗೊಂಡಿತು.

ರಾಜ್ಯದಾದ್ಯಂತ ಚಳುವಳಿ ಬಲಿಷ್ಠ ಗೊಳಿಸುವ, ಅಪೌಷ್ಟಿಕತೆ ಹೋಗಲಾ ಡಿಸಲು, ಶಿಕ್ಷಣ ಮಕ್ಕಳ ಹಕ್ಕಾಗಿಸಲು, ಬೆಲೆ ಏರಿಕೆ ವಿರುದ್ಧ, ಆಹಾರ ಭದ್ರತೆಗಾಗಿ, ಕನಿಷ್ಠ ಕೂಲಿ, ಉದ್ಯೋಗ ಭದ್ರತೆಗೆ ಹೋರಾಡುವ ಕುರಿತು ಸಮ್ಮೇಳನದಲ್ಲಿ ನಿರ್ಣಯ ಗಳನ್ನು ತೆಗೆದುಕೊಳ್ಳಲಾಯಿತು.

ಪದಾಧಿಕಾರಿಗಳ ಆಯ್ಕೆ: ರಾಜ್ಯ ಸಮಿತಿ ಅಧ್ಯಕ್ಷರಾಗಿ ಎಸ್. ವರಲಕ್ಷ್ಮಿ, ಕಾರ್ಯಾಧ್ಯಕ್ಷರಾಗಿ ಶಾಂತಾ ಎನ್. ಘಂಟೆ, ಪ್ರಧಾನ ಕಾರ್ಯದರ್ಶಿಯಾಗಿ ಸುನಂದಾ ಮೈಸೂರು, ಖಜಾಂಚಿ ಯಾಗಿ ಕಮಲಾ ಸರ್ವಾನುಮತದಿಂದ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಟಿ. ಲೀಲಾವತಿ, ಕೆ. ನಾಗರತ್ನ, ರಂಗಮ್ಮ, ಮುನಿರಾಜಮ್ಮ, ಮಂಜಮ್ಮ, ಮಂಜುಳಾರಾಜ್, ಸರಸ್ವತಿ ಮಠ, ಕಾರ್ಯದರ್ಶಿಗಳಾಗಿ ಯಮುನಾ ಗಾಂವ್ಕರ್, ಸರೋಜಾ, ಶ್ರೀದೇವಿ, ಗೌರಮ್ಮ ಪಾಟೀಲ, ಲಕ್ಷ್ಮಿದೇವಮ್ಮ, ದೊಡ್ಡವ್ವ ಪೂಜಾರಿ, ಸುಜಾತಾ ಆಯ್ಕೆಯಾದರು.

ರಾಜ್ಯ ಸಮಿತಿ ಸದಸ್ಯರಾಗಿ ಮಹಾದೇವಿ, ಮಾನಂದಾ, ದೇವಮ್ಮ, ಸವಿತಾ ತನ್ಮಡ್ಗಿ, ಕಲ್ಪನಾ ನಾಯ್ಕ, ಮೋಹಿನಿ ನಮ್ಸೇಕರ್, ಯರ‌್ರಮ್ಮ, ಉಮಾ, ಕೆ. ನಾಗರತ್ನ, ಈಶ್ವರಮ್ಮ, ಕಾವೇರಮ್ಮ, ಶಕುಂಕಲಾ, ಮಂಗಳಗೌರಿ, ಗುಲ್ಜಾರ, ಅನಸೂಯ, ಜಯಲಕ್ಷ್ಮಿ, ತನುಜಾ, ಸುನಂದಾ, ಬೇಬಿವಾಲಿ, ಗೋದಾವರಿ, ಗುರವ್ವ ಮಡಿವಾಳ, ಪ್ರೇಮಾ ಕಿಲ್ಲೇದಾರ್, ರತ್ನಾ, ವೆಂಕಟಲಕ್ಷ್ಮಿ, ಶಕುಂತಲಾ, ವರಲಕ್ಷ್ಮಿ, ಪದ್ಮಾ, ಸುಮಿತ್ರಾ, ಶಿವಮ್ಮ, ಕಲಾವತಿ,

ರವಿಕಲಾ, ಸುಶೀಲಾ ಕೊರವನಾಡಾರ್, ಇಂದ್ರಮ್ಮ, ಲತಾ, ನಾಗವೇಣಿ, ವಿಮಲಾ, ಸುರೇಖಾ, ದಾಸರ್, ಗೀತಾ ದೇಶಪಾಂಡೆ, ನಳಿನಾ, ಲಕ್ಷ್ಮಿ, ಬೆಂಗಳೂರು ಸೇರಿದಂತೆ ಒಟ್ಟಾರೆ 18 ಮಂದಿ ಪದಾಧಿಕಾರಿ ಗಳು, 43 ಜನ ರಾಜ್ಯ ಸಮಿತಿ ಸದಸ್ಯರು, 154 ಮಂದಿ ರಾಜ್ಯ ಕೌನ್ಸಿಲ್‌ರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಗೌರವ ಸಮರ್ಪಣೆ: ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದವರು, ರೈತ-ಕಾರ್ಮಿಕ ಸಂಘಟನೆ ಕಟ್ಟಲು ಶ್ರಮಿಸಿದವರಿಗೆ ಸಮ್ಮೇಳನದಲ್ಲಿ ಸನ್ಮಾನಿಸಿ, ಗೌರವ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.