ನಾಗಮಂಗಲ: ಕಾಡಿನಿಂದ ನಾಡಿಗೆ ಬಂದಿದ್ದ ಹೆಬ್ಬಾವೊಂದು ಯುವಕರ ಕೈಗೆ ಸಿಕ್ಕು ರಕ್ಷಣೆ ಪಡೆದು ಪುನಃ ಕಾಡು ಸೇರಿದ ಘಟನೆ ತಾಲ್ಲೂಕಿನ ಬ್ರಹ್ಮದೇವರಹಳ್ಳಿಯಲ್ಲಿ ಈಚೆಗೆ ನಡೆದಿದೆ.
ಸೋಮವಾರ ಗ್ರಾಮದ ಸೇತುವೆ ಬಳಿ ಕಂಡ 15 ಅಡಿ ಉದ್ದದ ಹೆಬ್ಬಾವನ್ನು ಗ್ರಾಮದ ಯುವಕರಾದ ಸೋಮ, ಮಹದೇವ್, ರಾಜ್ಕುಮಾರ್, ಮಂಜುನಾಥ್ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಿದರು. ಬಳಿಕ ಹೆಬ್ಬಾವನ್ನು ಮರಳಿ ಕಾಡಿಗೆ ಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.