ಶ್ರೀರಂಗಪಟ್ಟಣ: ಮಂಟೇಸ್ವಾಮಿ ಬಸವ ಉತ್ಸವ ಹಾಗೂ ಕುರುಬನ ಕಟ್ಟೆ ಕಂಡಾಯ ಸೇವೆ ತಾಲ್ಲೂಕಿನ ಅರಕೆರೆಯಲ್ಲಿ ಅ.18ರಂದು ನಡೆಯಲಿದೆ.
ಗ್ರಾಮದ ಕೆಳಗಲ ಪೇಟೆಯಲ್ಲಿ ಉತ್ಸವ ಜರುಗಲಿದೆ. ರಾಜ ಬೊಪ್ಪೇಗೌಡನಪುರ ಕ್ಷೇತ್ರದ ಜ್ಞಾನಾನಂದ ಚನ್ನರಾಜೇ ಅರಸು ಸ್ವಾಮೀಜಿ ಸಮ್ಮುಖದಲ್ಲಿ ಉತ್ಸವ ನಡೆಯಲಿದೆ.
ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಉತ್ಸವಕ್ಕೆ ಅಗಮಿಸಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಂಟೇಸ್ವಾಮಿ ಉತ್ಸವ ಸಮಿತಿಯ ದೊಡ್ಡಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.