ADVERTISEMENT

ಒಂದೇ ಸ್ಥಳದಲ್ಲಿಯೇ ಅಪಘಾತ: ಇಬ್ಬರ ಸಾವು

ಗಾಯಾಳು ಸಾಗಿಸಲು ಬಂದಿದ್ದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:53 IST
Last Updated 4 ಆಗಸ್ಟ್ 2024, 16:53 IST
ಬಸವೇಗೌಡ
ಬಸವೇಗೌಡ   

ಮಳವಳ್ಳಿ: ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದಾಗ ಮತ್ತೊಂದು ಬೈಕ್‌ನಲ್ಲಿ ಗಾಯಾಳುವನ್ನು ಸಾಗಿಸುತ್ತಿದ್ದಾಗ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಎಂ.ಬಸವಪುರ ಗ್ರಾಮದ ಬಳಿ ಶನಿವಾರ ಬೈಕ್ ಡಿಕ್ಕಿಯಾಗಿ ಪಾದಚಾರಿ ದೇವಿಪುರದ ಬಸವೇಗೌಡ(65) ಸಾವನ್ನಪ್ಪಿದ್ದರೆ, ಗಾಯಾಳು ಸಾಗಿಸಲು ಬಂದಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಮತ್ತೊಂದು ಬೈಕ್ ಸವಾರ ಮದ್ದೂರು ತಾಲ್ಲೂಕಿನ ದೇವರಹಳ್ಳಿಯ ನಾಗರಾಜು(28) ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ ರಸ್ತೆ ಬದಿಯಲ್ಲಿ ನಿಂತಿದ್ದ ಬಸವೇಗೌಡರಿಗೆ ತಳಗವಾದಿ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ತಳಗವಾದಿ ವಿಜಯ್ ಸಹ ಗಾಯಗೊಂಡಿದ್ದು, ಗಾಯಾಳುಗಳನ್ನು ವಾಹನದಲ್ಲಿ ಸಾಗಿಸಲು ಸಹಾಯ ಮಾಡುತ್ತಿದ್ದ ದೇವಿಪುರದ ಚೌಡಯ್ಯ ಅವರಿಗೆ ಕೆ.ಎಂ. ದೊಡ್ಡಿ ಕಡೆಯಿಂದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ನಾಗರಾಜು, ಚೌಡಯ್ಯ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಚಿಕಿತ್ಸೆಗೆ ಸ್ಪಂದಿಸದೇ ಗಾಯಾಳು ನಾಗರಾಜು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಬಸವೇಗೌಡ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚೌಡಯ್ಯಗೆ ಕಾಲು ಮುರಿದ್ದಿದ್ದು, ವಿಜಯ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗರಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.